Kundapra.com ಕುಂದಾಪ್ರ ಡಾಟ್ ಕಾಂ

ಕರಾವಳಿ ಯಕ್ಷ ಮಿತ್ರರು ವಾಟ್ಸಾಪ್ ಬಳಗದ 2ನೇ ವಾರ್ಷಿಕೋತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕರಾವಳಿ ಯಕ್ಷ ಮಿತ್ರರು (ವಾಟ್ಸಾಪ್ ಬಳಗ ) ಇವರ ಆಶ್ರಯದಲ್ಲಿ 2ನೇ ವರ್ಷದ ಸವಿನೆನಪಿಗಾಗಿ ಅಶಕ್ತ ಹಾಗೂ ಪ್ರತಿಭಾನ್ವಿತ ಯಕ್ಷ ಕಲಾವಿದರಿಗೆ ಸಹಾಯ ಹಸ್ತ ಮತ್ತು ಸನ್ಮಾನ ಕಾರ್ಯಕ್ರಮವು ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಐ.ಟಿ ಕಾಲೇಜಿನ ಪ್ರೋಪೆಸರ್, ಯಕ್ಷ ಚಿಂತಕರು, ಹವ್ಯಾಸಿ ಭಾಗವತರಾಂದತಹ ಎಸ್.ವಿ ಉದಯ ಕುಮಾರ್ ಶೆಟ್ಟಿಯವರು ವಹಿಸಿದ್ದರು

ಸೇವಾ ಸಹಕಾರಿ ಬ್ಯಾಂಕ್ ಮಂದಾರ್ತಿ ಇದರ ಅಧ್ಯಕ್ಷರಾದ ಗಂಗಾಧರ ಶೆಟ್ಟಿಯವರು, ಮೊಗವೀರ ಯುವ ಸಂಘಟನೆ ಮಂದಾರ್ತಿ ಇದರ ಸ್ಥಾಪಕಾಧ್ಯಕ್ಷರಾದಂತಹ ಅಶೋಕ ಕುಂದರ್, ಸಮಾಜ ಸೇವಕರು ಆದಂತಹ ಪ್ರಶಾಂತ್ ಯಡಾಡಿ, ಕರಾವಳಿ ಯಕ್ಷಮಿತ್ರರು (ವಾಟ್ಸಾಪ್ ಬಳಗ)ದ ಸ್ಥಾಪಕಾಧ್ಯಕ್ಷರಾದಂತಹ ಧನುಷ್ ಶೆಟ್ಟಿ ಹೊಳೆಬಾಗಿಲು ಹಾಗೂ ಮಹೇಶ್ ಪೂಜಾರಿ ಹೂಡೆಯವರು ಉಪಸ್ಥಿತರಿದ್ದರು.

ಅಶಕ್ತ ಕಲಾವಿದ ಪ್ರವೀಣ. ಪಿ ಆಚಾರ್ಯರವರಿಗೆ ಧನ ಸಹಾಯ ಹಾಗೂ ಸನ್ಮಾನ ಮಾಡಲಾಯಿತ್ತು, ಯಕ್ಷ ಭಾಗವತ ಗಣೇಶ್ ಆಚಾರ್ಯ ಹಾಗೂ ಯಕ್ಷ ಸಂಘಟಕರಾದ ಅಶೋಕ ಕುಂದರ್ ಅವರಿಗೂ ಸನ್ಮಾನ ಮಾಡಲಾಯಿತ್ತು. ಕಾರ್ಯಕ್ರಮದ ನಿರೂಪಣೆ ಧನುಷ್ ಶೆಟ್ಟಿ ಹೊಳೆಬಾಗಿಲು ನಿರ್ವಹಿಸಿದರು. ಈ ಕಾರ್ಯಕ್ರಮದಲ್ಲಿ ಯಕ್ಷ ಅಭಿಮಾನಿಗಳು ಹಾಗೂ ಕಲಾ ಪ್ರೋತ್ಸಾಹಕರು ಉಪಸ್ಥಿತರಿದ್ದರು.

Exit mobile version