Kundapra.com ಕುಂದಾಪ್ರ ಡಾಟ್ ಕಾಂ

ಮಾನಸಜ್ಯೋತಿ ವಿಶೇಷ ಮಕ್ಕಳಿಂದ ‘ಮೊಬೈಲ್ ಎಕ್ಸ್‌ಪ್ರೆಸ್’ ಮಳಿಗೆ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉತ್ಕೃಷ್ಟ ಸೇವೆಯ ಮೂಲಕ ಕುಂದಾಪುರದಲ್ಲಿ ಯಶಸ್ವೀ 6ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಇಲ್ಲಿನ ಪ್ರಸಿದ್ಧ ಮೊಬೈಲ್ ಮಾರಾಟ ಮಳಿಗೆ ’ಮೊಬೈಲ್ ಎಕ್ಸ್’ ಕುಂದಾಪುರದ ಮುಖ್ಯರಸ್ತೆಯ ರಾಮಕೃಷ್ಣ ಕಾಂಪ್ಲೆಕ್ಸ್ನಲ್ಲಿ ಇನ್ನೊಂದು ಮಳಿಗೆ ’ಮೊಬೈಲ್ ಎಕ್ಸ್‌ಪ್ರೆಸ್’ ಆರಂಭಿಸಿದ್ದು, ಇಂದು ಕೋಣಿ ಮಾನಸಜ್ಯೋತಿ ವಿಶೇಷ ಮಕ್ಕಳು ನೂತನ ಮಳಿಗೆಯನ್ನು ಉದ್ಘಾಟಿಸಿದರು.

ಅತಿಥಿಗಳಾಗಿ ಒಪ್ಪೊ ಡಿಸ್ಟ್ರಿಬ್ಯೂಟರ್ ಕೆ.ಪಿ ಕಾಮತ್, ಸ್ಯಾಮಸಂಗ್ ಡಿಸ್ಟ್ರಿಬ್ಯೂಟರ್ ಶ್ರೀಕಾಂತ್, ವಿವೋ ಜನರಲ್ ಮ್ಯಾನೆಜರ್ ಪೃಥ್ವಿ, ಕಟ್ಟಡದ ಮಾಲಿಕ ರಾಜೇಶ್ ಶೇಟ್ ಮಾನಸ ಜ್ಯೋತಿ ಟ್ರಸ್ಟಿನ ಶೋಭಾ, ಅಕಿಲೇಶ್ ಮೊದಲಾದವರು ಇದ್ದರು.

ಮೊಬೈಲ್ ಎಕ್ಸ್ ಸಮೂಹ ಸಂಸ್ಥೆಗಳ ಪ್ರವರ್ತಕ ಮುಸ್ತಾಫಾ ಅತಿಥಿಗಳನ್ನು ಸ್ವಾಗತಿಸಿದರು. ಕೋಣಿ ಮಾನಸಜ್ಯೋತಿ ವಿಶೇಷ ಮಕ್ಕಳ ಶಾಲೆಗೆ ದೇಣಿಗೆ ನೀಡಲಾಯಿತು.

ಮೊಬೈಲ್ ಎಕ್ಸ್ಪ್ರೆಸ್ನಲ್ಲಿ ಹೋಲ್ ಸೆಲ್ ಹಾಗು ರಿಟೇಲ್ ಕಂಪ್ಯೂಟರ್ ಅಕ್ಸೆಸರೀಸ್, ಮೊಬೈಲ್ಸ್ ಸೇಲ್ ಹಾಗು ಸರ್ವಿಸ್ ಲಭ್ಯವಿರಲಿದೆ. ನೂತನ ಮಳಿಗೆಯ ಆರಂಭದ ಕೊಡುಗೆಯಾಗಿ ಅರ್ಧ ದರದಲ್ಲಿ ಮೊಬೈಲ್ ಹಾಗೂ ಕಂಪ್ಯೂಟರ್ ಅಕ್ಸೆಸರೀಸ್ಗಳನ್ನು ಮಾರಾಟಮಾಡಲಾಗುತ್ತಿದೆ. ಜೊತೆಗೆ ಅ.13ರಂದು ಲಕ್ಕಿ ಗ್ರಾಹಕರನ್ನು ಡ್ರಾ ಮೂಲಕ ಆಯ್ಕೆ ಮಾಡಲಾಗುತ್ತದೆ. ಲಕ್ಕಿ ಗ್ರಾಹಕರಿಗೆ ಪ್ರಥಮ ಬಹುಮಾನವಾಗಿ ಎಲ್ ಈ ಡಿ ಟಿವಿ, ಎರಡನೇ ಬಹುಮಾನವಾಗಿ ’ಟವರ್ ಸಬ್ವೂಫರ್’, ಮೂರನೇ ಬಹುಮಾನವಾಗಿ ’ಸ್ಮಾರ್ಟ್ ಪೋನ್’ ಲಭ್ಯವಾಗಲಿದೆ.

Exit mobile version