ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಮೂಕಾಂಬಿಕಾ ರೈಲ್ವೆ ನಿಲ್ದಾಣದ ಎದುರಿನ ಪ್ರಸಿದ್ಧ ಹೋಟೆಲ್ ಅಂಬಿಕಾ ಇಂಟರ್ನ್ಯಾಷನಲ್ನಲ್ಲಿ ನೂತನವಾಗಿ ಆರಂಭಗೊಂಡ ನಿತ್ಯ ಸಾಗರ ವೆಜ್ ರೆಸ್ಟೊರೆಂಟ್ ಹಾಗೂ ಕೋಸ್ಟಲ್ ಕರಿ ನಾನ್ ವೆಜ್ ಬಾರ್ ಮತ್ತು ರೆಸ್ಟೊರೆಂಟ್ಗಳಿಗೆ ಶುಕ್ರವಾರ ವಿವಿಧ ದೇವತಾ ಕಾರ್ಯದ ಮೂಲಕ ಚಾಲನೆ ನೀಡಲಾಯಿತು.
ಈ ಸಂದರ್ಭ ಹೋಟೆಲ್ ಅಂಬಿಕಾ ಇಂಟರ್ನ್ಯಾಷನಲ್ನ ಆಡಳಿತ ನಿರ್ದೇಶಕ ಜಯಾನಂದ ಹೋಬಳಿದಾರ್, ಮೂಕಾಂಬಿಕಾ ಜಯಾನಂದ ಹೋಬಳಿದಾರ್, ನಿತ್ಯಾ ಫುಡ್ ಮ್ಯಾನೆಜ್ಮೆಂಟ್ ಸರ್ವಿಸನ್ ಸಂಸ್ಥೆಯ ನಿತೀಶ್ ಶೆಟ್ಟಿ, ರವಿ ಅಂಚನ್, ನಾಗರಾಜ ಶೆಟ್ಟಿ, ಸುರೇಂದ್ರ ಶೆಟ್ಟಿ, ಟೆಂಪೋ, ರಿಕ್ಷಾ, ಟ್ಯಾಕ್ಸಿ ಚಾಲಕ ಮಾಲಕರ ಸಂಘದ ಅಧ್ಯಕ್ಷ ಸುರೇಶ್ ಬಟವಾಡಿ, ಸದಸ್ಯರಾದ ಅಣ್ಣಪ್ಪ ಪೂಜಾರಿ, ರಾಮ ದೇವಾಡಿಗ, ವಿಹಿಂಪ ಉಪ್ಪಂದ ಘಟಕದ ಅಧ್ಯಕ್ಷ ಸುಧಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
Also Read: ಸರ್ವ ಸುಸಜ್ಜಿತ ಹೋಟೆಲ್ ಅಂಬಿಕಾ ಇಂಟರ್ನ್ಯಾಶನಲ್