Kundapra.com ಕುಂದಾಪ್ರ ಡಾಟ್ ಕಾಂ

ಕ್ರಾಂತಿವೀರ ಭಗತ್‌ ಸಿಂಗ್ ಯುವಕರ ಸ್ಫೂರ್ತಿ: ರಾಹುಲ್ ಡೋಂಗ್ರೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಧಾರವಾಡ: ವೇಳಾಪಟ್ಟಿ ಇಲ್ಲದ ಬದುಕು ಹಳಿ ತಪ್ಪಿದ ರೈಲಿನಂತೆ ಇರುತ್ತದೆ. ಯುವಜನರು ನಿರ್ದಿಷ್ಟ ಗುರಿ ಇಟ್ಟುಕೊಳ್ಳುವುದಲ್ಲದೇ ಸಾಧನೆಗಾಗಿ ಸೂಕ್ತ ದಾರಿಯನ್ನು ಆಯ್ದುಕೊಳ್ಳುವುದು ಅತ್ಯಗತ್ಯ ಎಂದು ಧಾರವಾಡ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ರಾಹುಲ್ ಡೋಂಗ್ರೆ ಹೇಳಿದರು.

ಅವರು ಶನಿವಾರ ನೆಹರು ಯುವ ಕೇಂದ್ರ ಸಂಘಟನಾ ಬೆಂಗಳೂರು ಹಾಗೂ ನೆಹರು ಯುವ ಕೇಂದ್ರ ಧಾರವಾಡ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಸಿಡಾಕ್‌ನಲ್ಲಿ ಆಯೋಜಿಸಲಾದ ಕ್ರಾಂತಿವೀರ ಭಗತ್‌ಸಿಂಗ್ ಅವರ ೧೧೨ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಗತ್‌ಸಿಂಗ್ ಅವರ ಭಾವಚಿತ್ರಕ್ಕೆ ಪುಪ್ಪಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ದೇಶಕ್ಕಾಗಿ ಸಾವಿರಾರು ಜನರು ಪ್ರಾಣತ್ಯಾಗ ಮಾಡಿದ್ದಾರೆ. ಆದರೆ ಕೆಲವರು ಇಂದಿಗೂ ಅಜರಾಮರಾಗಿ ಉಳಿದು ಭಾರತೀಯರ ಹೃದಯದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಭಗತ್‌ಸಿಂಗ್ ಅವರಂತಹ ಕ್ರಾಂತಿವೀರರು ಭಾರತ ದೇಶದ ಯುವಕರಿಗೆ ನಿಜಕ್ಕೂ ಸ್ಥೂತಿಯಾಗಿದ್ದಾರೆ ಎಂದರು.

ಈ ಸಂದರ್ಭ ಕಾರ್ಯಕ್ರಮ ಸಂಯೋಜನಾಧಿಕಾರಿಗಳಾದ ಲಿಂಗರಾಜ್ ನಿಡುವಾನಿ, ನೆಹರು ಯುವ ಕೇಂದ್ರ ಧಾರವಾಡದ ಲೆಕ್ಕಾಧಿಕಾರಿಗಳಾದ ಎ. ಜಿ. ಪುರಾಣಿಕ್, ವಿಜಾಪುರದ ಲೆಕ್ಕಾಧಿಕಾರಿಗಳಾದ ಬೇಬಿ ದೊಡ್ಮನಿ, ಶಿವಾಜಿ ಕಡ್ಡೆಪ್ಪನವರ್, ವಿರೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಬಿರಾರ್ಥಿ ಕಿರಣ ಸಿಂಗ್ ಭಗತ್‌ಸಿಂಗ್ ಅವರ ಹೋರಾಟದ ಹಿನ್ನೆಲೆ ತಿಳಿಸಿದರು.

ನೆಹರು ಯುವ ಕೇಂದ್ರದ ಸ್ವಯಂ ಸೇವಕರುಗಳಾದ ಸುಮಿತ್ರ ಸ್ವಾಗತಿಸಿ, ಸುಬ್ರಹ್ಮಣ್ಯ ಆಚಾರ್ಯ ವಂದಿಸಿದರು. ಮಲ್ಲಪ್ಪ ನಾಗರವಳ್ಳಿ ಕಾರ್ಯಕ್ರಮ ನಿರೂಪಿಸಿದರು.

Exit mobile version