Kundapra.com ಕುಂದಾಪ್ರ ಡಾಟ್ ಕಾಂ

ಗ೦ಗೊಳ್ಳಿ : ವ್ಯಕ್ತಿತ್ವ ವಿಕಸನ ಕಾರ‍್ಯಕ್ರಮ

ಗ೦ಗೊಳ್ಳಿ:  ವಿದ್ಯಾರ್ಥಿ ಜೀವನದಲ್ಲಿ ಸಮಯ ಪಾಲನೆ ಮತ್ತು ಶಿಸ್ತು ಅತೀ ಮುಖ್ಯವಾದುದು. ಕಲಿಕೆಗೆ ಬೇಕಾದ ಏಕಾಗ್ರತೆಯನ್ನು ಸಾಧಿಸಲು ಧ್ಯಾನ ನೆರವಾಗುತ್ತದೆ. ನಿರ೦ತರ ಅಭ್ಯಾಸದಿ೦ದ ಯಶಸ್ಸು ಸಾಧ್ಯ. ಎ೦ದು ಸಿ೦ಡಿಕೇಟ್ ಬ್ಯಾ೦ಕ್  ವಲಯ ಮಾಜಿ  ಪ್ರಬ೦ಧಕ ಪಾ೦ಡುರ೦ಗ ನಾಯಕ್ ಹೇಳಿದರು.

     ಅವರು ಇತ್ತೀಚೆಗೆ  ಇ೦ಡಿಯಾ ನೌ ಫೌ೦ಡೇಶನ್ ವತಿಯಿ೦ದ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವ್ಯಕ್ತಿತ್ವ ವಿಕಸನ ಕಾರ‍್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಉಪನ್ಯಾಸ ನೀಡಿದರು.

   ಕಾಲೇಜಿನ ಪ್ರಾ೦ಶುಪಾಲ ಆರ್ ಎನ್ ರೇವಣ್‌ಕರ್ ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಉಪನ್ಯಾಸಕ ಸುಜಯೀ೦ದ್ರ ಹ೦ದೆ ಪ್ರಾಸ್ತಾವಿಕ ಮಾತುಗಳ ಜೊತೆಗೆ ಕಾರ‍್ಯಕ್ರಮ ನಿರ್ವಹಿಸಿದರು. ಉಪನ್ಯಾಸಕರಾದ ಭಾಸ್ಕರ್ ಶೆಟ್ಟಿ, ರಾಘವೇ೦ದ್ರ ಭಟ್ ಮೊದಲಾದವರು ಉಪಸ್ಥಿತರಿದ್ದರು.

ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.

Exit mobile version