Kundapra.com ಕುಂದಾಪ್ರ ಡಾಟ್ ಕಾಂ

ವಾಸ್ತುತಜ್ಞ ಬಸವರಾಜ್ ಶೆಟ್ಟಿಗಾರರ ವಿದೇಶ ಪ್ರವಾಸ

ಕುಂದಾಪುರ: ಯು.ಎ.ಇ. ಪದ್ಮಶಾಲಿ ಸಮುದಾಯದ 6ನೇ ವಾರ್ಷಿಕೋತ್ಸವದ ಪ್ರಯುಕ್ತ ದುಬೈನ ಸಿಂಧಿ ಕಮರ್ಶಲ್ ಸೆಂಟರ್‌ನ ಹಾಲ್‌ನಲ್ಲಿ ನಡೆಯಲಿರುವ ಸಾಮೂಹಿಕ ಸತ್ಯನಾರಾಯಣ ಪೂಜೆಯ ಪೌರೋಹಿತ್ಯಕ್ಕಾಗಿ ಜ್ಯೋತಿಷಿ ಹಾಗೂ ವಾಸ್ತುತಜ್ಞ ಬಸವರಾಜ್ ಶೆಟ್ಟಿಗಾರ್ ವಿದೇಶಕ್ಕೆ ತೆರಳಲಿದ್ದಾರೆ.

ವಾಸ್ತುಶಾಸ್ತ್ರ, ಜ್ಯೋತಿಷ್ಯ, ಯಕ್ಷಗಾನ, ಸಾಹಿತ್ಯ, ಸಮಾಜ ಸಂಘಟನೆ, ಕೃಷಿ ಕ್ಷೇತ್ರ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಾಗಿ ಶೆಟ್ಟಿಗಾರರಿಗೆ 215ನೇ ಸನ್ಮಾನ ಮಾಡಿ ಗೌರವಿಸಲಾಗುವುದೆಂದು ಯು.ಎ.ಇ. ಪದ್ಮಶಾಲಿ ಕಮ್ಯೂನಿಟಿಯ ಅಧ್ಯಕ್ಷರು ತಿಳಿಸಿದ್ದಾರೆ. ಅಲ್ಲದೇ ವಿದೇಶದಲ್ಲಿ ಸರಳವಾಸ್ತು ಆಧುನಿಕ ಜ್ಯೋತಿಷ್ಯದ ಕುರಿತು ಮಾಹಿತಿ ನೀಡಲಿರುವ ಬಸವರಾಜ್ ಶೆಟ್ಟಿಗಾರ್‌ರವರು ಕೋಟೇಶ್ವರದ ಕಛೇರಿಯಲ್ಲಿ ಹಾಗೂ ಹಂಗಳೂರು ಶನೀಶ್ವರ ದೇವಸ್ಥಾನದಲ್ಲಿ ಜುಲೈ 1ರಿಂದ 15ರ ವರೆಗೆ ಲಭ್ಯವಿರುವುದಿಲ್ಲವೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Exit mobile version