Kundapra.com ಕುಂದಾಪ್ರ ಡಾಟ್ ಕಾಂ

ಸಸ್ಯಲೋಕದ ವಿಸ್ಮಯ: ವಿಶೇಷ ಉಪನ್ಯಾಸ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಫೆಬ್ರುವರಿ 29ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ವಿಜ್ಞಾನ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮದ ಅತಿಥಗಲಾಗಿ ಆಗಮಿಸಿದ್ದ ನಿವೃತ್ತ ಪ್ರಾಧ್ಯಾಪಕ ಡಾ| ಅರವಿಂದ ಹೆಬ್ಬಾರ್ ಅವರು ಸಸ್ಯಲೋಕದ ವಿಸ್ಮಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಸಸ್ಯಲೋಕವೆಂಬುದು ವಿಸ್ಮಯ ಮತ್ತು ಅದ್ಭುತಗಳ ಆಗರ. ನಾವು ನೋಡದ ಕೇಳದ ಎಷ್ಟೋ ವಿಚಾರಗಳು ಸಂಗತಿಗಳು ಪ್ರಕೃತಿಯ ಮಡಿಲಲ್ಲಿ ಹುದುಗಿದೆ. ಅದನ್ನು ತಿಳಿಯುವುದೇ ವಿಜ್ಞಾನದ ಅದ್ಭುತವಾಗಿದೆ ಎಂದು ಕೆಲವು ಮಾಹಿತಿಗಳನ್ನು ತಿಳಿಸಿದರು.

ಇನ್ನೊಬ್ಬ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕುಂದಾಪುರದ ಜ್ಞಾನಭಾರತಿ ಐ.ಟಿ.ಐ ಕಾಲೇಜಿನ ಪ್ರಾಂಶುಪಾಲ ರಾಘವೇಂದ್ರ ಅವರು ಮಾತನಾಡಿ ನಿi ವಿಷಯಗಳ ಕಲಿಯುವಿಕೆಯೊಂದಿಗೆ ನಿi ಕೌಶಲ ಹೆಚ್ಚಿಸುವ ಯಾವುದೇ ವಿಷಯದ ಕುರಿತು ವಿಶೇಷ ತರಬೇತಿ ಪಡೆದಿರಬೇಕು. ಅದು ಮುಂದೆ ನಿಮ್ಮ ಭವಿಷ್ಯಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ| ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ| ಲಲಿತಾದೇವಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಸೌಮ್ಯ, ಕಾರ್ಯಕ್ರಮ ನಿರ್ವಹಿಸಿ ಪ್ರಜ್ಞಾ ವಂದಿಸಿದರು.

Exit mobile version