Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಬಬ್ಬುಸ್ವಾಮಿ ಸ್ವಯಂ ಸೇವಾ ಸಂಘ: ಅಗತ್ಯವುಳ್ಳವರಿಗೆ ಅಕ್ಕಿ ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗಂಗೊಳ್ಳಿ ಬಾವಿಕಟ್ಟೆಯ ಬಬ್ಬುಸ್ವಾಮಿ ಸ್ವಯಂ ಸೇವಾ ಸಂಘದ ವತಿಯಿಂದ ಗಂಗೊಳ್ಳಿ ಪೊಲೀಸ್ ಠಾಣೆಯ ಸಹಕಾರದೊಂದಿಗೆ ಗುರುತಿಸಿದ ಗಂಗೊಳ್ಳಿ ಪರಿಸರದ ಬಡ ಮತ್ತು ವಿಕಲಚೇತನರ ಮನೆಗಳಿಗೆ ತಲಾ ೧೫ ಕೆ.ಜಿ. ಅಕ್ಕಿಯನ್ನು ಮಂಗಳವಾರ ಉಚಿತವಾಗಿ ವಿತರಿಸಲಾಯಿತು.

ಬಬ್ಬುಸ್ವಾಮಿ ಸ್ವಯಂ ಸೇವಾ ಸಂಘದ ಅಧ್ಯಕ್ಷ ಜಗದೀಶ ಗಂಗೊಳ್ಳಿ, ಸಂಪತ್ ಎಂ. ಜಿ., ಸಚಿನ್ ಬಿ., ಸವಿನ್ ಡಿ., ಗಂಗೊಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಚಂದ್ರಶೇಖರ ಮತ್ತು ಶ್ರೀಧರ ಉಪಸ್ಥಿತರಿದ್ದರು.

Exit mobile version