ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಡುಪಿ ತಾಲೂಕಿನ ಶಿರಿಯಾರ ಹಾಗೂ ಕುಂದಾಪುರ ತಾಲೂಕಿನ ಯಡ್ಯಾಡಿ- ಮತ್ಯಾಡಿ ಗ್ರಾಮದಲ್ಲಿ ನೆಲೆಸಿರುವ ಕುಟುಂಬಗಳಿಗೆ, ಭಂಡಾರ್ಕಾರ್ಸ್ ಕಾಲೇಜು 93-94ರ ಸಾಲಿನ ಪಿಯುಸಿ ಸ್ನೇಹಿತರು ದಿನಸಿ ಸಾಮಾಗ್ರಿಗಳನ್ನು ವಿತರಿಸಿದರು.
ಕೊಲ್ಲುಕೋರೆ ಕೆಲಸ ಮಾಡಿಕೊಂಡಿದ್ದ ತಮಿಳುನಾಡು ಮೂಲದ ಕುಟುಂಬಗಳು ದಿನದ ದುಡಿಮೆಯನ್ನೇ ನಂಬಿ ಬದುಕುತ್ತಿದ್ದು, ಲಾಕ್ಡೌನ್ ಬಳಿಕ ಅವರ ಸ್ಥಿತಿ ದುಸ್ಥರವಾಗಿರುವುದನ್ನು ಅರಿತು ೨೫ ಕುಟುಂಬಗಳಿಗೆ ಅಗತ್ಯ ದಿನಸಿ ಸಾಮಾಗ್ರಿಗಳನ್ನು ವಿತರಿಸಲಾಯಿತು.