Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರದ ಉದ್ಯಮಿ ಕುವೈತ್‌ನಲ್ಲಿ ಕೊರೋನಾ ಸೊಂಕಿಗೆ ಬಲಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುವೈಟ್ ದೇಶದಲ್ಲಿ ನೆಲೆಸಿರುವ ಉದ್ಯಮಿ, ಕುಂದಾಪುರ ಖಾರ್ವಿಕೇರಿಯ ಮೊಹಮದ್ ಸಯ್ಯದ್ (54) ಅವರು ಕುವೈಟ್ನಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟಿರುವ ಬಗ್ಗೆ ತಿಳಿದುಬಂದಿದೆ.

ಭಂಡಾರ್ಕಾಸ್ ಕಾಲೇಜಿನ ಮಾಜಿ ಅಥ್ಲೆಟಿಕ್ ಛಾಂಪಿಯನ್ ಆಗಿ ಗುರುತಿಸಿಕೊಂಡಿದ್ದ ಅವರು ಉತ್ತಮ ವಾಲಿಬಾಲ್, ಕಬಡ್ಡಿ ಪಟುವಾಗಿದ್ದರು. ಕುಂದಾಪುರದ ಹಳೆ ಬಸ್ ನಿಲ್ದಾಣ ಬಳಿ ಇವರ ಕುಟುಂಬದವರು ‘ಶೂ ಲ್ಯಾಂಡ್ ಪಾದರಕ್ಷೆ ಮಳಿಗೆ ಹೊಂದಿದ್ದರು. ಕುವೈತಿನಲ್ಲಿದ್ದ ಅವರು ಮೂರು ವಾರಗಳಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ.

Exit mobile version