Kundapra.com ಕುಂದಾಪ್ರ ಡಾಟ್ ಕಾಂ

ಉಪನ್ಯಾಸಕ ಕೆ. ವಿ. ನಾಯಕ್‌ಗೆ ಬಿಳ್ಕೋಡುಗೆ

ಕುಂದಾಪುರ: ವಿವಿಧ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕಾಲೇಜಿನ ಬೆಳವಣಿಗೆಯಲ್ಲಿ ಮಹತ್ತರವಾದ ಪಾತ್ರ ನಿರ್ವಹಿಸಿ, ಹಿರಿಯ ಕಿರಿಯರೆಲ್ಲರಿಗೂ ಅಚ್ಚುಮೆಚ್ಚಾಗಿ ಸ್ನೇಹ ಸಹಕಾರದೊಂದಿಗೆ ಬೆರತು ಕರ್ತವ್ಯ ನಿರ್ವಹಿಸಿದ ಉಪನ್ಯಾಸಕ ಕೆ. ವಿ. ನಾಯಕರ ವ್ಯಕ್ತಿತ್ವ ಎಲ್ಲರಿಗೂ ಮಾದರಿ ಎಂದು ಉಪನ್ಯಾಸಕ ರಾಮಕೃಷ್ಣ ಹೇಳಿದರು

ಅವರು ಕುಂದಾಪುರದ ಸ. ಪ. ಪೂರ್ವ ಕಾಲೇಜಿನ ಉಪನ್ಯಾಸಕ ವೃಂದದವರು ಮೈಸೂರು, ಹಾಸನ, ತೆಕ್ಕಟ್ಟೆ, ಕಾರ್ಕಳ ಪಳ್ಳಿ, ನಾವುಂದ, ಕುಂದಾಪುರದಲ್ಲಿ ಸೇವೆಯನ್ನು ಸಲ್ಲಿಸಿ ಸುದೀರ್ಘ ಸೇವೆಯಿಂದ ನಿವೃತ್ತರಾದ ಕೆ. ವಿ. ನಾಯಕ್ ಅವರ ಬಿಳ್ಕೋಡುಗೆ ಸಮಾರಂಭದಲ್ಲಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ಸುಬ್ರಹ್ಮಣ್ಯ ಜೋಶಿ ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿ ಕೆ. ವಿ. ನಾಯಕ್ ಅವರನ್ನು ಸನ್ಮಾನಿಸಿ, ನಿವೃತ್ತಿ ಜೀವನಕ್ಕೆ ಶುಭಕೋರಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಕುಸುಮಾ ಪೈ, ರವೀಂದ್ರ ಉಪಾಧ್ಯಾಯ, ಶಿವಾನಂದ, ಪೂರ್ಣಿಮಾ, ಸಂಧ್ಯಾ, ಸುಶೀಲಾ, ಚಂದ್ರಶೇಖರ ಇನ್ನಿತರರು ಉಪಸ್ಥಿತರಿದ್ದರು.

Exit mobile version