ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಪಡುವರಿಯಲ್ಲಿ ವಾಸವಾಗಿರುವ ಉಪ್ಪಿನಕುದ್ರು ವಾಸನಮನೆಯ ರತ್ನಾಕರ ಶೇರೆಗಾರ್ ಮತ್ತು ಶ್ರೀದೇವಿ ದಂಪತಿಗಳ ಪುತ್ರ ವಿಪಿನ್ ಆರ್. ಶೇರೆಗಾರ್ಗೆ ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ಅಗತ್ಯವಾದ ರೂ. ೪೮,೦೦೦ ಮೌಲ್ಯದ ಲ್ಯಾಪ್ಟಾಪ್ನ್ನು ಟ್ರಸ್ಟ್ನ ಪರವಾಗಿ ಶ್ರೀ ರಾಮ ಶೈಕ್ಷಣಿಕ ದತ್ತು ಯೋಜನೆಯಡಿಯಲ್ಲಿ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ರಾಮ ವಿವಿಧೋದ್ಧೇಶ ಟ್ರಸ್ಟ್ಟ್ನ ಆಡಳಿತ ಟ್ರಸ್ಟಿಗಳಾದ ಬಿ. ರಾಮಕೃಷ್ಣ ಶೇರೆಗಾರ್, ಟ್ರಸ್ಟಿಗಳಾದ ಕೆ. ಜಿ. ನಾಗಪ್ಪ ಶೇರೆಗಾರ್, ವೆಂಕಟ್ರಮಣ ಬಿಜೂರು ಹಾಗೂ ಸಂಚಾಲಕರಾದ ಆನಂದ ಮದ್ದೋಡಿ ಉಪಸ್ಥಿತರಿದ್ದರು.

