Kundapra.com ಕುಂದಾಪ್ರ ಡಾಟ್ ಕಾಂ

ಇನ್‌ಸ್ಪಾಯರ್ ಅವಾರ್ಡ್‌: ಶ್ರೀಶ ರಾಜ್ಯಮಟ್ಟಕ್ಕೆ

ಬೈಂದೂರು: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಇತ್ತಿಚಿಗೆ ಬಂಟಕಲ್ಲು ಶ್ರೀ ಮಧ್ವವಾದಿರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಮೆನೇಜ್‌ಮೆಂಟ್‌ ಕಾಲೇಜಿನಲ್ಲಿ ಆಯೋಜಿಸಿದ್ದ 2015-16ನೇ ಸಾಲಿನ ಇನ್‌ಸ್ಪಾಯರ್ ಅವಾರ್ಡ್‌ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಬೈಂದೂರು ಸರ್ಕಾರಿ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿ ಶ್ರೀಶ ಬಿ.ಕೆ. ತಯಾರಿಸಿದ ಟ್ರಿ ಶಿಫ್ಟಿಂಗ್ ಹೈಡ್ರೋಲಿಕ್ ಮೆಶಿನ್ ವಿಜ್ಞಾನ ಮಾದರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ಇವರು ಬೈಂದೂರು ಬಾಡ ಜಯಾನಂದ ಬಿ.ಕೆ ಹಾಗೂ ಭಾನುಮತಿ ಬಿ.ಕೆ. ಯವರ ಪುತ್ರ.

Exit mobile version