Kundapra.com ಕುಂದಾಪ್ರ ಡಾಟ್ ಕಾಂ

ಕೋಟೇಶ್ವರ: ವಿಪ್ರ ಗಣ್ಯರಿಗೆ ಸಮ್ಮಾನ

ಕುಂದಾಪುರ: ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತುನಿಂದ  ಕೋಟೇಶ್ವರದ ರಥಬೀದಿಯಲ್ಲಿರುವ ಶಾದರಾ ಕಲ್ಯಾಣ ಮಂಟಪದಲ್ಲಿ ವಿಪ್ರವಾಣಿ ಸಂಚಿಕೆ ಬಿಡುಗಡೆ ಹಾಗೂ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು.

ಪರಿಷತ್ತ್‌ಗಾಗಿ ತಾಲೂಕು ಅಧ್ಯಕ್ಷರಾದ ವಕ್ವಾಡಿ ಸುಬ್ರಹ್ಮಣ್ಯ ಐತಾಳರ ಜೊತೆ ಸೇರಿ ಅವಿರತವಾಗಿ ಶ್ರಮಿಸಿದ ಶಿಕ್ಷಣ ತಜ್ಞರಾದ ಬಿ.ಲಕ್ಷ್ಮೀನಾರಾಯಣ ಉಪಾಧ್ಯಾಯರು ಹಾಗೂ ದೊಡ್ಮನೆ ಶ್ರೀ ಮುಖ್ಯ ಪ್ರಾಣ ದೇವಸ್ಥಾನದ ಪ್ರಧಾನ ಅರ್ಚಕರಾದ ವೈ.ಎನ್.ವೆಂಕಟೇಶಮೂರ್ತಿ ಭಟ್ಟರನ್ನು ಅಧ್ಯಕ್ಷರು ಅವರ ಸೇವೆಯನ್ನು ಗೌರವಿಸಿ ಸಮ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ವಿಪ್ರವಾಣಿ ಪ್ರಾಯೋಜಕರಾದ ವೇ.ಮೂ. ಸುದರ್ಶನ ಉಡುಪ ದಂಪತಿಗಳು, ಗೌರವಾಧ್ಯಕ್ಷ ಕೆ.ಶ್ರೀನಿವಾಸ ಹೆಬ್ಬಾರ್, ಜ್ಯೋತಿಷ್ಯ ವಿದ್ವಾನ್ ಟಿ.ವಾಸುದೇವ ಜೋಯಿಸರು ಹಾಗೂ ಜ್ಯೋತಿಷ್ಯ ಶಿರೋಮಣಿ ವಿಶ್ವನಾಥ ಉಪಾಧ್ಯಾಯರು ನೂತನ ಅಧ್ಯಕ್ಷ ಕೆ.ಗಣೇಶ ರಾವ್ ಹಾಗೂ ಪ್ರಧಾನ ಕಾರ್ಯದರ್ಶಿ ಹಳ್ಳಿ ಶ್ರೀನಿವಾಸ ಭಟ್ಟರು, ತಾಲೂಕು ಮಹಿಳಾ ಅಧ್ಯಕ್ಷೆ ಶ್ರೀಮತಿ ಅನ್ನಪೂರ್ಣ ಉಡುಪ ಉಪಸ್ಥಿತರಿದ್ದರು.

Exit mobile version