ಕೊಲ್ಲೂರು: ಬಿಎಸ್ಎನ್ಎಲ್ ಚೀಫ್ ಜನರಲ್ ಮ್ಯಾನೇಜರ್ ಪಿ.ನಾಗರಾಜು ಗುರುವಾರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಅವರು ಮಾತನಾಡಿ ದೇವಳದ ಸುತ್ತಮುತ್ತಲು ಶೀಘ್ರದಲ್ಲಿಯೇ ವೈಫೈ, ಹಾಟ್ಸ್ಪಾಟ್ ಸೌಲಭ್ಯ ಜಾರಿಗೆ ತರಲಾಗುವುದು ಎಂದರು.
ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಕಷ್ಣಮೂರ್ತಿ ಮತ್ತು ಧರ್ಮದರ್ಶಿ ಶ್ರೀನಿವಾಸ ಕಲ್ಲೂರಾಯ ಗೌರವಿಸಿದರು. ಬಿಎಸ್ಎನ್ಎಲ್ ಮಂಗಳೂರು ವಿಭಾಗದ ಜನರಲ್ ಮ್ಯಾನೇಜರ್ ಜಿ.ಆರ್.ರವಿ, ಎಜಿಎಂ ಪುರಂದರ ಶೆಟ್ಟಿ, ಮೊಬೈಲ್ ಡಿಇ ಉಮೇಶ್ ಭಟ್, ಕುಂದಾಪುರ ಡಿಇ ಪುರಾಣಿಕ್, ಬೈಂದೂರು ಎಸ್ಡಿ ಭಾಸ್ಕರ್, ಕೊಲ್ಲೂರು ಎಕ್ಸ್ಚೇಂಜ್ನ ಯೋಗೀಶ್ ಉಪಸ್ಥಿತರಿದ್ದರು.