Kundapra.com ಕುಂದಾಪ್ರ ಡಾಟ್ ಕಾಂ

ಅ.4: ಇಂದಿನಿಂದ 4ದಿನ ಗೋ ಸಮ್ಮೇಳನ

ಉಡುಪಿ: ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಹಾಲು ಉತ್ಪಾದಕರ ಒಕ್ಕೂಟ ಹಾಗೂ ಇತರ ಹಲವು ಸಂಘಟನೆಗಳ ಸಹಭಾಗಿತ್ವದಲ್ಲಿ ಅ.4ರಿಂದ 7ರ ವರೆಗೆ ಬೃಹತ್‌ ಗೋ ಸಮ್ಮೇಳನ ನಡೆಯಲಿದೆ.

ವಿನಾಶದ ಅಂಚಿನಲ್ಲಿರುವ ಗೋವುಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಉಡುಪಿಯಲ್ಲಿ  ನಡೆಸಲು ತೀರ್ಮಾನಿಸಲಾಗಿದೆ ಎಂದು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಪರ್ಯಾಯ ಶ್ರೀ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಹೇಳಿದರು.

 ಸಮ್ಮೇಳನದಲ್ಲಿ “ಗೋ ಆಧಾರಿತ ಕೃಷಿ, ಗೋ ಆಧಾರಿತ ವಾಣಿಜ್ಯ, ಗೋ ಆಧಾರಿತ ಚಿಕಿತ್ಸೆ, ಗೋ ಆಧಾರಿತ ಜೀವನ’ ವಿಷಯದ ಕುರಿತು ದೇಶದ ಪ್ರಮುಖ ಕೃಷಿ ತಜ್ಞರು, ವಿಜ್ಞಾನಿಗಳು, ಸಾಧಕರು, ಚಿಂತಕರು, ಮಠಾಧೀಶರು ವಿಚಾರ ಮಂಡಿಸಲಿದ್ದಾರೆ. ಗೋ ಜಾಗೃತಿ ಯುವ ಸಮಾವೇಶ ಕೂಡ ನಡೆಯಲಿದೆ ಎಂದವರು ತಿಳಿಸಿದರು.

Exit mobile version