Kundapra.com ಕುಂದಾಪ್ರ ಡಾಟ್ ಕಾಂ

ಹಳ್ಳಿಹೊಳೆಯಲ್ಲಿ ನಿರುಪಯುಕ್ತ ಕಲ್ಲರಳಿ ಕಲಾಕೃತಿಯಾಯ್ತು!

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಸ್ತೆ ಬದಿಯಲ್ಲಿ ನಿರುಪಯುಕ್ತವಾಗಿ ಬಿದ್ದಿದ್ದ ಕಲ್ಲಿಗೆ ಜೀವ ತುಂಬಿದ ಕಲಾವಿದರು ತಮ್ಮ ಕಲಾಕೃತಿಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಕಮಲಶಿಲೆ ಹಳ್ಳಿಹೊಳೆಯ ಮಾರ್ಗದ ರಸ್ತೆಯಂಚಿನಲ್ಲಿ ಬಿದ್ದಿದ್ದ ಕಡುಗಲ್ಲಿಗೆ ಕಲಾವಿದ ಚೇತನ್ ಕುಮಾರ್ ಮತ್ತು ಅಭಿಷೇಕ್ ಹೊಸ ವರ್ಷದ ಸಂದರ್ಭ ಜೀವ ತುಂಬಿದ್ದು ಮಲಗಿದ ಹಸನ್ಮುಖಿ ಕಪ್ಪೆಯ ಕಲಾಕೃತಿಯನ್ನು ರಚಿಸಿದ್ದಾರೆ. ಈ ಸುಂದರ ಕಲಾಕೃತಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಚೇತನ್ ಕುಮಾರ್ ಮೂಡುಬಿದ್ರೆ ಕಲಾವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದು, ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಾಲೇಜು ತೆರೆದ ಕಾರಣ ತಮ್ಮ ಊರಾದ ಹಳ್ಳಿಹೊಳೆಯಲ್ಲಿ ಉಳಿದು ಹತ್ತಾರು ಕಲಾಕೃತಿಗಳನ್ನು ರಚಿಸಿ ಗಮನ ಸೆಳೆದಿದ್ದರು.

Exit mobile version