ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಹೀರೋ ಸಂಸ್ಥೆಯ 100 ಮಿಲಿಯನ್ ಬೈಕ್ಗಳನ್ನು ಮಾರಾಟ ಮಾಡಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಹೀರೋ ಶೋರೂಮ್ಗಳಲ್ಲಿ ಸಂಭ್ರಮಾಚರಣೆ ನಡೆದಿದ್ದು, ಬೈಂದೂರು ಎಸ್ಎಸ್ವಿ ಮೋಟರ್ಸ್ ಆವರಣದಲ್ಲಿಯೂ ಸಂಭ್ರಮಾಚರಣೆ ನಡೆಯಿತು.
ಬೈಂದೂರು ವೃತ್ತ ನಿರೀಕ್ಷಕರಾದ ಸಂತೋಷ್ ಕಾಯ್ಕಿಣಿ ಅವರು ಕೇಕ್ ಕತ್ತರಿಸಿ ಶುಭಹಾರೈಸಿದರು.
ಈ ಸಂದರ್ಭ ಬೈಂದೂರು ತಾಪಂ ಉಪಾಧ್ಯಕ್ಷರಾದ ಮಾಲಿನಿ ಕೆ., ಎಪಿಎಂಸಿ ಅಧ್ಯಕ್ಷರಾದ ವೆಂಕಟ ಪೂಜಾರಿ, ಬೈಂದೂರು ಬಿಜೆಪಿ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ, ಉದ್ಯಮಿಗಳಾದ ಸದಾಶಿವ ಪಡುವರಿ, ವೆಂಕಟರಮಣ ಬಿಜೂರು, ಸುರೇಶ್ ಹೋಬಳಿದಾರ್, ಭೀಮೇಶ್ ಕುಮಾರ್, ಶಿವಾನಂದ್, ಉದಯಕುಮಾರ್ ಶೆಟ್ಟಿ, ಕರ್ನಾಟಕ ಬ್ಯಾಂಕ್ ಬೈಂದೂರು ಶಾಖಾ ಪ್ರಂಬಂಧಕರಾದ ಪರಮೇಶ್ವರ ಪೂಜಾರಿ, ವಿಜಯ ಬ್ಯಾಂಕ್ ಶಾಖಾ ಪ್ರಬಂಧಕರಾದ ನಾಗೇಶ್ ಮೊದಲಾದವರು ಇದ್ದರು.
ಬೈಂದೂರು ಎಸ್ಎಸ್ವಿ ಮೋಟರ್ಸ್ ಕೃಷ್ಣಯ್ಯ ಮದ್ದೋಡಿ ಸ್ವಾಗತಿಸಿ, ಶಿಕ್ಷಕರಾದ ಆನಂದ ಮದ್ದೋಡಿ ಕಾರ್ಯಕ್ರಮ ನಿರೂಪಿಸಿದರು.