ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಕ್ಲಾಡಿ ಭಜನಾ ಮಂದಿರ ಯಕ್ಷ ಮಿತ್ರರು ಪ್ರತಿವರ್ಷ ನಡೆಸುವ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶನಿವಾರ ಯಕ್ಷಗಾನ ಪ್ರದರ್ಶನ, ಭಜನೆ, ಧಾರ್ಮಿಕ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಹಕ್ಲಾಡಿ ಭಜನಾ ಮಂದಿರ ವಠಾರದಲ್ಲಿಈ ಬಾರಿಯ ಕಾರ್ಯಕ್ರಮದ ಅಂಗವಾಗಿ ನಡೆದ ಆಜ್ರಿ ಜೋನನ ಮನೆ ಶನೇಶ್ವರ ಮೇಳದ ಯಕ್ಷಗಾನ ಪ್ರದರ್ಶನದಲ್ಲಿ ಹಕ್ಲಾಡಿ ಗ್ರಾಮಸ್ಥರ ಪರವಾಗಿ ಯಕ್ಷಮಿತ್ರರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಶ್ರೀಪತಿ ಹೆಗಡೆ ಹಕ್ಲಾಡಿ ಹಾಗೂ ಸ್ಥಳೀಯ ವೈದ್ಯ ಡಾ. ಸುಕೇಶ್ ಶೆಟ್ಟಿ ಹೊಳ್ಮಗೆ ಅವರನ್ನು ಸನ್ಮಾನಿಸಲಾಯಿತು.
ಹಕ್ಲಾಡಿ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯಶಿಕ್ಷಕ ವಸಂತ್ ಹೆಗ್ಡೆ ಸನ್ಮಾನಿಸಿದರು. ಹೆಮ್ಮಾಡಿ ಪಂಚಗಂಗ ರೈತರ ಸೇವಾ ಸಹಕಾರಿ ಬ್ಯಾಂಕ್ನ ಜಗನ್ನಾಥ ಶೆಟ್ಟಿ, ಹಕ್ಲಾಡಿ ಸುರೇಂದ್ರ ಪೂಜಾರಿ ತೊಪ್ಲು, ಗಣೇಶ್ ಮೇಸ್ತ್ರಿ , ಅರ್ಚಕ ರಾಜು, ವಸಂತ, ಸತೀಶ್, ಶರತ್, ಉಮೇಶ್, ನಾಗರಾಜ ಡಿ, ಗಣೇಶ್, ಹರೀಶ್, ರತ್ನಾಕರ, ಗಣಪತಿ, ಚಂದ್ರ ಪೂಜಾರಿ ಸಂತೆಗದ್ದೆ, ಲೋಕೇಶ್, ಶಿವರಾಮ ಸಂತೆಗದ್ದೆ ಇದ್ದರು. ಹಕ್ಲಾಡಿ ಗುಡ್ಡೆ ಅಶೋಕ್ ನಿರೂಪಿಸಿದರು