Kundapra.com ಕುಂದಾಪ್ರ ಡಾಟ್ ಕಾಂ

ಹೊಸಾಡಿನಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಪೊಲೀಸ್ ಠಾಣೆ ಆಶ್ರಯದಲ್ಲಿ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಹೆದ್ದಾರಿ ಜಂಕ್ಷನ್ನಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ನಡೆಯಿತು.

ಠಾಣಾಧಿಕಾರಿ ಭೀಮಾಶಂಕರ್ ಎಸ್. ಮಾತನಾಡಿ, ಈ ಸಾಲಿನ ಸಪ್ತಾಹವು ರಸ್ತೆ ಸುರಕ್ಷತೆ, ಜೀವದ ರಕ್ಷೆ ಕುರಿತು ಅರಿವು ಮೂಡಿಸುವ ಗುರಿಯೊಂದಿಗೆ ಇದೇ 17ರ ವರೆಗೆ ನಡೆಯುತ್ತಿದೆ ಎಂದರು.

ಎಎಸ್ಐ ವೆಂಕೇಶ ಗೊಲ್ಲ, ಠಾಣಾ ಸಿಬ್ಬಂದಿ ಯೋಗೀಶ್, ದಿನೇಶ ಹಾಗೂ ಮುಳ್ಳಿಕಟ್ಟೆ ಆಟೊಶಂಕರ್ ರಿಕ್ಷಾ ಚಾಲಕ ಪ್ರದೀಪ್ ಬಿಲ್ಲವ, ಯೊಗೀಶ್ ಮೊಗವೀರ, ಗಣೇಶ್ ದೇವಾಡಿಗ, ಲೊಕೇಶ್ ಪೂಜಾರಿ ಇದ್ದರು.

Exit mobile version