ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಇಲ್ಲಿನ ಶಿರೂರು ಸಮೀಪದ ಅಳ್ವೆಗದ್ದೆ ಕ್ರಾಸ್ ಬಳಿ ವೇಗವಾಗಿ ಬಕ್ ಚಲಾಯಿಸಿದ ಬಾಲಕನೋರ್ವ ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ಗೆ ಡಿಕ್ಕಿ ಹೊಡೆದು ಸ್ಥಳದಲ್ಲೆ ಸಾವನ್ನಪ್ಪಿದ್ದ ಘಟನೆ ಗುರುವಾರ ಮುಂಜಾನೆ ನಡೆದಿದೆ. ಬಕ್ ಸವಾರ ಹಡವಿನಕೋಣೆ ನಿವಾಸಿ ಅರಾನ್ (೧೫) ಮೃತ ದುರ್ದೈವಿ.
ಕಳೆದ ವಾರವಷ್ಟೆ ಪೊಲೀಸರು ಈತನ ಚಾಲನೆ ಪರವಾನಿಗೆ ಇಲ್ಲದೆ ಬಕ್ ಚಲಾಯಿಸುತ್ತಿದ್ದ ವೇಳೆ ಪತ್ತೆ ಹಚ್ಚಿ ದಂಡ ವಿಧಿಸಿದ್ದರು. ಆ ನಂತರವೂ ಗುರುವಾರ ಮುಂಜಾನೆ ಬಕ್ ಚಲಾಯಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಘಟನಾ ಸ್ಥಳಕ್ಕೆ ಬೈಂದೂರು ಪಿಎಸೈ ಸಂಗೀತಾ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ. ಬಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.