Kundapra.com ಕುಂದಾಪ್ರ ಡಾಟ್ ಕಾಂ

ಜೆಸಿಐ ವ್ಯಕ್ತಿತ್ವ ವಿಕಸನದ ಆಂದೋಲನ: ಸೌಜನ್ಯ ಹೆಗಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಜೆಸಿಐ ವ್ಯಕ್ತಿತ್ವ ವಿಕಾಸಕ್ಕೆ ಇರುವ ಆಂದೋಲನ. ಇದರಲ್ಲಿ ಸಕ್ರಿಯವಾಗಿ ಭಾಗವಹಿಸಿದರೆ ಬದುಕಿನಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿದೆ ಎಂದು ವಲಯಾಧ್ಯಕ್ಷೆ ಸೌಜನ್ಯ ಹೆಗಡೆ ಹೇಳಿದರು.

ಅವರು ಗುರುವಾರ ಬೈಂದೂರು ಶ್ರೀ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಜರುಗಿದ ಜೆಸಿಐ ಬೈಂದೂರು ಸಿಟಿ ಇದರ 2021ನೇ ಸಾಲಿನ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿದರು.

ಜೆಸಿಐ ಬೈಂದೂರು ಸಿಟಿಯ ನಿರ್ಗಮಿತ ಅಧ್ಯಕ್ಷೆ ಪ್ರಿಯದರ್ಶಿನಿ ಕಮಲೇಶ್ ಅವರು ನೂತನ ಅಧ್ಯಕ್ಷ ಶ್ರೀಧರ ಆಚಾರ್ಯ ಅವರಿಗೆ ಜೆಸಿಐ ಪದಕ, ದಂಡವನ್ನು ಹಸ್ತಾಂತರಿಸಿದರು.

ವಲಯ ಉಪಾಧ್ಯಕ್ಷ ನಾಗೇಶ್ ನಾವಡ, ವಲಯಾಧಿಕಾರಿ ಮಣಿಕಂಠ ಎಸ್. ಜೆಸಿಐ ಕಾರ್ಯದರ್ಶಿ ಸವಿತಾ ದಿನೇಶ್, ಜೆಸಿರೇಟ್ ಅಧ್ಯಕ್ಷೆ ಅನಿತಾ ಆರ್.ಕೆ., ಜೆಜೆಸಿ ಅಧ್ಯಕ್ಷೆ ನಿಖಿತಾ ಗಾಣಿಗ, ಜೆಸಿರೇಟ್ ಪೂರ್ವಾಧ್ಯಕ್ಷೆ ಭಾನುಮತಿ ಬಿ. ಕೆ., ಇದ್ದರು. ನಿಕಟಪೂರ್ವಾಧ್ಯಕ್ಷೆ ಪ್ರಿಯದರ್ಶಿನಿ ಬೆಸ್ಕೂರು ಸ್ವಾಗತಿಸಿದರು. ಗೀತಾ ಬೈಂದೂರು ಜೆಸಿವಾಣಿ ವಾಚಿಸಿದರು. ರಾಘವೇಂದ್ರ ಯಡ್ತರೆ ನೂತನ ಅಧ್ಯಕ್ಷರನ್ನು ಪರಿಚಯಿಸಿದರು. ಎಚ್. ಸುಶಾಂತ್ ಬೈಂದೂರು ಹಾಗೂ ಅಮರ್ ದೇವಾಡಿಗ ಅವರನ್ನು ಗೌರವಿಸಲಾಯಿತು.

ಮಂಗಳೂರು ವಲಯ ಅರಣ್ಯಾಧಿಕಾರಿ ಪಿ. ಶ್ರೀಧರ ಮಾತನಾಡಿ ಸಂಘ ಸಂಸ್ಥೆಗಳಲ್ಲಿ ಜವಾಬ್ದಾರಿ ತೆಗೆದುಕೊಳ್ಳುವುದು ಮನುಷ್ಯನನ್ನು ವೈಯಕ್ತಿಕವಾಗಿ ಹಾಗೂ ಸಾಮಾಜಿಕವಾಗಿ ಬೆಳೆಯಲು ಸಾಧ್ಯವಾಗಿಸುತ್ತದೆ ಎಂದರು.

 

Exit mobile version