Kundapra.com ಕುಂದಾಪ್ರ ಡಾಟ್ ಕಾಂ

ಆಳ್ವಾಸ್ ಕಾಲೆಜಿನ ಉಪನ್ಯಾಸಕಿ ಅರ್ಚನಾ ಪ್ರಭಾತಗೆ ರಾಷ್ಟ್ರಮಟ್ಟ ಪ್ರಶಸ್ತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದರೆ: ಇಂಡಿಯನ್ ಅಸೋಸಿಯೇಶನ್ ಫಾರ್ ಪೇರೆಂಟರಲ್ ಆಂಡ್ ಎಂಟರಲ್ ನ್ಯೂಟ್ರಿಶನ್ ವತಿಯಿಂದ ಕ್ಲಿನಿಕಲ್ ಪ್ರಾಕ್ಟೀಸ್, ಶಿಕ್ಷಣ ಹಾಗೂ ಅಡ್ವೊಕೆಸಿ ಕ್ಷೇತ್ರದಲ್ಲಿನ ಸಾಧಕರಿಗೆ ಕೊಡಮಾಡುವ 202ರ ಪ್ರಶಸ್ತಿಗೆ ಆಳ್ವಾಸ್ ಸ್ನಾತಕೋತ್ತರ ಕಾಲೇಜಿನ ಫುಡ್ ಸಯನ್ಸ್ ಆಂಡ್ ನ್ಯೂಟ್ರಿಶನ್ ವಿಭಾಗದ ಮುಖ್ಯಸ್ಥೆ ಡಾ. ಅರ್ಚನಾ ಪ್ರಭಾತ್ ಆಯ್ಕೆಯಾಗಿದ್ದಾರೆ.

ಕ್ಲಿನಿಕಲ್ ಮತ್ತು ಕಮ್ಯುನಿಟಿ ನ್ಯೂಟ್ರಿಷನ್ ಕ್ಷೇತ್ರದಲ್ಲಿ ನೀಡಿದ ಕೊಡುಗೆ ಮತ್ತು ಸಾಧನೆಗಳಿಗಾಗಿ ರಾಷ್ಟ್ರೀಯ ಮಟ್ಟದ ಎಕ್ಸೆಲೆನ್ಸ್ ಇನ್ ನ್ಯೂಟ್ರಿಶನ್ ರಿಸರ್ಚ್ ಪ್ರಶಸ್ತಿಗೆ ರಾಷ್ಟ್ರ ಮಟ್ಟದಲ್ಲಿ ಡಾ. ಅರ್ಚನಾ ಪ್ರಭಾತ್ ಆಯ್ಕೆಯಾಗಿದ್ದರೆ, ರಾಜ್ಯ ಮಟ್ಟದಲ್ಲಿ ಚೆನೈನ ಲೇಖಾ ಶ್ರೀಧರನ್, ಜಿಲ್ಲಾ ಮಟ್ಟದ ಚಂಡಿಘರ್ನ ಡಾ. ಶಿಲ್ಪ ಸಖಾನಿ ಪಡೆದುಕೊಂಡಿದ್ದಾರೆ.

ಅರ್ಚನಾ ಪ್ರಭಾತ್ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದ ಆಳ್ವಾಸ್ ಕಾಲೇಜಿನ ಪದವಿ ಹಾಗೂ ಸ್ನಾತಕೊತ್ತರ ವಿಭಾಗದ ಫುಡ್ ಆಂಡ್ ಸಯನ್ಸ್ ವಿಭಾಗವನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವರ ಬೆಂಬಲದೊಂದಿಗೆ ಆರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರಸ್ತುತ ಇಂಡಿಯನ್ ಅಸೋಸಿಯೇಶನ್ ಫಾರ್ ಪೇರೆಂಟರಲ್ ಆಂಡ್ ಎಂಟರಲ್ ನ್ಯೂಟ್ರಿಶನ್ ನ ಮಂಗಳೂರು ವಿಭಾಗವನ್ನು ಆರಂಭಿಸಲು ಪ್ರಾದೇಶಿಕ ಅಧಿಕಾರಿಯಾಗಿ ಆಯ್ಕೆಗೊಂಡಿದ್ದಾರೆ

Exit mobile version