Kundapra.com ಕುಂದಾಪ್ರ ಡಾಟ್ ಕಾಂ

ಲಯನ್ಸ್ ಕ್ಲಬ್ ಕುಂದಾಪುರ ಇಂಜಿನಿಯರ್ಸ್: ಸನ್ನದು ಪ್ರಧಾನ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ‘ಲಯನ್ಸ್ ಕ್ಲಬ್ ಕುಂದಾಪುರ ಇಂಜಿನಿಯರ್ಸ್’ ಇದರ ಸನ್ನದು ಪ್ರಧಾನ ಹಾಗೂ ಜಿಲ್ಲಾ ಗವರ್ನರ್ ಅಧಿಕೃತ ಭೇಟಿಯು ಕುಂದಾಪುರದ ಕೋಯಾಕುಟ್ಟಿ ಸಭಾಂಗಣದಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಜಿಲ್ಲಾ ಗವರ್ನರ್ ಆದ ಲಯನ್ ಎನ್. ಎಂ. ಹೆಗಡೆ ‘ಲಯನ್ಸ್ ಕ್ಲಬ್ ಕುಂದಾಪುರ ಇಂಜಿನಿಯರ್ಸ್’ ಇದರ ಅಧ್ಯಕ್ಷರಾದ ಲಯನ್ ಇಂಜಿನಿಯರ್ ಚೇತನ್ ಹೆಗಡೆ, ಕಾರ್ಯದರ್ಶಿ ಲಯನ್ ಇಂಜಿನಿಯರ್ ರಶ್ವಿನ್ ಕೆ.ಎಚ್. ಹಾಗೂ ಕೋಶಾಧಿಕಾರಿ ಲಯನ್ ಇಂಜಿನಿಯರ್ ರಮೇಶ್ ಆಚಾರ್ ಹಾಗೂ ಸದಸ್ಯರಿಗೆ ಸನ್ನದು ಪ್ರಧಾನ ಮಾಡಿದರು ಹಾಗೆಯೇ ಎಲ್ಲಾ ಸದಸ್ಯರಿಗೆ ಸದಸ್ಯತ್ವ ನೀಡಲಾಯಿತು.

ಈ ಕ್ಲಬ್ಬಿನ ಮೊದಲ ಕಾರ್ಯಕ್ರಮದ ಅಂಗವಾಗಿ ‘ಬಿ. ಆರ್. ರಾಯರ ಹಿಂದೂ ಹಿರಿಯ ಪ್ರಾಥಮಿಕ ಶಾಲೆ’ಕುಂದಾಪುರ ಇವರಿಗೆ ಒಂದು ಹೊಸ ಸೋಕ್ ಪಿಟ್ ನಿರ್ಮಿಸಿ ಲಯನ್ಸ್ ಜಿಲ್ಲಾ ಗವರ್ನರ್ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.

ಲಯನ್ಸ್ ಜಿಲ್ಲೆ 317ಸಿ ಇದರ ಗವರ್ನರ್ ಆದ ಲಯನ್ ಎನ್.ಎಂ. ಹೆಗಡೆ ಹಾಗೂ ಕ್ಯಾಬಿನೆಟ್ ಸೆಕ್ರೆಟರಿ ಲಯನ್ ಟಿ.ಜಿ. ಆಚಾರ್ಯ, ಝೋನ್ ಚೇರ್ಮೆನ್ ಲಯನ್ ವಿಶ್ವನಾಥ್ ಶೆಟ್ಟಿ, ರಿಜನ್ ಚೇರ್ಮನ್ ಲಯನ್ ಡಾಕ್ಟರ್ ಬಾಲಕೃಷ್ಣ ಶೆಟ್ಟಿ, ಎಕ್ಸ್ಟೆಂಶನ್ ಚೇರ್ಮನ್ ಲಯನ್ ರಮಾನಂದ ಕೆ, ಹಾಗೂ ಪ್ರಯೋಜಕ ಕ್ಲಬ್ ‘ಲಯನ್ಸ್ ಕ್ಲಬ್ ಕುಂದಾಪುರ’ ಇದರ ಅಧ್ಯಕ್ಷರಾದ ಲಯನ್ ಚಂದ್ರಶೇಖರ ಕಲ್ಪತರು, ಸೆಕ್ರೆಟರಿ ಲಯನ್ ಡಾಕ್ಟರ್ ರಾಜೇಂದ್ರ, ಕೋಶಾಧಿಕಾರಿ ಲಯನ್ ಕಿರಣ್ ಕುಮಾರ, ಹಾಗೇ ಲಯನ್ಸ್ ಜಿಲ್ಲೆ 317ಸಿ ಇದರ ಬೇರೆ ಬೇರೆ ಕ್ಲಬ್ಬಿನ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

Exit mobile version