Kundapra.com ಕುಂದಾಪ್ರ ಡಾಟ್ ಕಾಂ

ಕೆರ್ಗಾಲ್: ಉದ್ಯೋಗ ಖಾತ್ರಿ ಯೋಜನೆಯಡಿ ಶ್ರಮದಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಕೆಗಾ೯ಲ್ ಗ್ರಾಮದ ಮೊಗೇರಿಯ ಭಟ್ಟರ್ ಹಿತ್ಲ್ ಪ್ರದೇಶದಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ತೋಡು ಹೂಳೆತ್ತುವ ಕಾಮಗಾರಿಯ ಸ್ಥಳಕ್ಕೆ ಕೃಷಿಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾಯ೯ದಶಿ೯ ವೆಂಕಟೇಶ್ ಕೋಣಿ ಭೇಟಿ ನೀಡಿದರು

ಅವರು ಮಾಚ್೯ 31ರಂದು ನಡೆಯುವ ಕೂಲಿಕಾರರ ‘ಬೇಡಿಕಾ ದಿನಾಚರಣೆ’ ರಾಜ್ಯವ್ಯಾಪಿ ಹೋರಾಟ ಕಾಯ೯ಕ್ರಮದ ಅಂಗವಾಗಿ ಬೈಂದೂರು ತಾಲೂಕು ಪಂಚಾಯತ್ ಕಚೇರಿ ಮುತ್ತಿಗೆ ಹೋರಾಟದಲ್ಲಿ ಕೂಲಿಕಾರರೆಲ್ಲರೂ ಭಾಗವಹಿಸಿ, ಯಶಸ್ವಗೊಳಿಸಬೇಕು ಎಂದು ಕರೆ ನೀಡಿದರು.

ಏಳಜೀತ್ ಗ್ರಾಮದ ಕೃಷಿಕೂಲಿಕಾರರ ಸಂಘದ ಮುಖಂಡರಾದ ಸೀತಕ್ಕ ಭಾಗವಹಿಸಿ ಕೂಲಿಕಾರರಿಗೆ ಸಲಹೆ, ಮಾಗ೯ದಶ೯ನ ನೀಡಿದರು.

Exit mobile version