ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಲ್ಪೆಯ ದಿನೇಶ್ ತಿಂಗಳಾಯ ಇವರ ಮೀನುಗಾರಿಕಾ ‘ಶ್ರೀ ಶಿವರಕ್ಷ’ ಬೋಟ್ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿರುವಾಗ ಆಕಸ್ಮಿಕವಾಗಿ ಸಂಪೂರ್ಣ ಮುಳುಗಡೆಯಾದ ಪರಿಣಾಮ ಬಾಬ್ತು ವಿಮಾ ಪರಿಹಾರವಾಗಿ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪೆನಿಯ ಪರವಾಗಿ ಕುಂದಾಪುರ ಶಾಖೆಯ ಶಾಖಾಧಿಕಾರಿ ಪಿ. ದಿನಕರ್ ಇವರು 40 ಲಕ್ಷದ ವಿಮಾ ಪರಿಹಾರವನ್ನು ಬೋಟಿನ ಮಾಲಕರಾದ ದಿನೇಶ್ ತಿಂಗಳಾಯ ಅವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಚೀಫ್ ಅಡ್ವೈಸರ್ ಹೆಚ್ ಸೀತಾರಾಮ ಹೆಗ್ಡೆ, ಬ್ಯುಸಿನೆಸ್ ಎಸೋಸಿಯೇಡ್ ವಿಲ್ಪ್ರೆಡ್ ಡಿ’ಸೋಜಾ ಸಿಬ್ಬಂದಿ ರಾಯಪುಡಿ ಜಗದೀಶ್ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.