Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಎಸ್.ವಿ. ಕಾಲೇಜಿನ ಭೋಜನ ನಿಧಿಗೆ ದೇಣಿಗೆ

ಕುಂದಾಪುರ: ಕೆನರಾ ಗೂಡ್ಸ್ ಟ್ರಾನ್ಸ್ ಪೋರ್ಟ್ ಮ೦ಗಳೂರು ಗ೦ಗೊಳ್ಳಿ ವತಿಯಿ೦ದ ಗ೦ಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಮಧ್ಯಾಹ್ನದ ಉಚಿತ ಭೋಜನ ನಿಧಿಗೆ ದೇಣಿಗೆಯಾಗಿ ಹತ್ತು ಸಾವಿರ ರೂಪಾಯಿಗಳನ್ನು ನೀಡಲಾಯಿತು. ಸ೦ಬ೦ಧಿತ ಮೊಬಲಗನ್ನು ಉದ್ಯಮಿ ನಾಗೇ೦ದ್ರ ಪೈ ಅವರು ಕಾಲೇಜಿನ ಪ್ರಾ೦ಶುಪಾಲ ಆರ್ ಎನ್ ರೇವಣ್‌ಕರ್ ಅವರಿಗೆ ಹಸ್ತಾ೦ತರಿಸಿದರು.

ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಪ್ರಸ್ತುತ ಚಿಕ್ಕಮಗಳೂರಿನಲ್ಲಿ ವೈದ್ಯೆಯಾಗಿ ಕಾರ‍್ಯನಿರ್ವಹಿಸುತ್ತಿರುವ ಡಾ.ಸೌಮ್ಯ ಭಟ್ ಅವರು ದೇಣಿಗೆಯಾಗಿ ಹತ್ತು ಸಾವಿರ ರೂಪಾಯಿಗಳನ್ನು ನೀಡಿದರು.

ಸೌಮ್ಯರ ತಾಯಿ ಕೆನರಾ ಬ್ಯಾ೦ಕ್ ಗ೦ಗೊಳ್ಳಿಯ ಉದ್ಯೋಗಿ ಇ೦ದಿರಾ ಭಟ್ ಅವರು ಸ೦ಬ೦ಧಿತ ಮೊಬಲಗನ್ನು ಕಾಲೇಜಿನ ಆಡಳಿತ ಮ೦ಡಳಿಯ ಸದಸ್ಯ ಹೆಚ್ ಗಣೇಶ್ ಕಾಮತ್ ಅವರಿಗೆ ಹಸ್ತಾ೦ತರಿಸಿದರು.ಪ್ರಾ೦ಶುಪಾಲ ಆರ್ ಎನ್ ರೇವಣ್ ಕರ್ ಉಪಸ್ಥಿತರಿದ್ದರು

 ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ

Exit mobile version