ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಹಿರಿಯ ಸಾಹಿತಿಗಳು, ಮಾಣಿಕ್ಯ ವಿಠಲ ಎಂಬ ಕಾವ್ಯನಾಮದಿಂದ ಭಕ್ತಿ ಗೀತೆಗಳನ್ನು ರಚಿಸಿ ಆಧುನಿಕ ದಾಸ ಎಂದು ಹೆಸರು ಪಡೆದ ಬಿದರ್ನ ಡಾ. ಮಾಣಿಕರಾವ್ ಗೋವಿಂದರಾವ್ ದೇಶಪಾಂಡೆ ಇವರು ನಾವುಂದ ಶ್ರೀ ಬ್ರಹ್ಮ ಬೈದರ್ಕಳ ಗರಡಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಗರಡಿಯ ಬಲ್ಲಾಳಿ ಚಂದ್ರಶೇಖರ ಶೆಟ್ಟಿ, ಗರಡಿ ಮನೆಯವರಾದ ಆಡಳಿತ ಮೋಕ್ತೇಸರಾದ ಶೇಖರ್ ಪೂಜಾರಿ ಶಾಲು ಹೊದಿಸಿ ಗರಡಿಯ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಟ್ರಷ್ಟಿಗಳಾದ ಎನ್ ಕೆ ಬಿಲ್ಲವ, ಆರ್ ಕೆ ಬಿಲ್ಲವ, ಮುತ್ತ ಬಿಲ್ಲವ ಉಪಸ್ಥಿತರಿದ್ದರು.