Kundapra.com ಕುಂದಾಪ್ರ ಡಾಟ್ ಕಾಂ

ಇನ್ಸಪಾಯರ್ ಅವಾರ್ಡ್: ತಿರುಮಲ ರಾಜ್ಯ ಮಟ್ಟಕ್ಕೆ

ಬೈಂದೂರು: ಇಲ್ಲಿನ ತಗ್ಗರ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿ ತಿರುಮಲ ಹುದಾರ್ 2015-16ನೇ ಸಾಲಿನ ಇನ್ಸಪಾಯರ್ ಅವಾರ್ಡ್ ಸ್ವರ್ಧೆಯಲ್ಲಿ ಪ್ರದರ್ಶಿಸಿದ ‘ಬಸ್ಸಿನಲ್ಲಿ ಲಿಫ್ಟ್’ ಮಾದರಿಯು ರಾಜ್ಯ ಮಟ್ಟಕ್ಕೆ ಸ್ವರ್ಧೆಗೆ ಆಯ್ಕೆಯಾಗಿದೆ.

ಉಡುಪಿ ಬಂಟಕಲ್ಲಿನ ಶ್ರೀ ಮಧ್ವವಾದಿರಾಜ ಇನ್ಸ್ಟಿಟ್ಯೂಟ್ ನಲ್ಲಿ ನಡೆದ ಇನ್ಸ್ಪಾಯರ್ ಅವಾರ್ಡ್ ಸ್ವರ್ಧೆಯುಲ್ಲಿ ತಿರುಮಲ ತಯಾರಿಸಿದ ಬಸ್ಸಿನಲ್ಲಿ ವಿಶೇವಾಗಿ ಅಗತ್ಯ ಉಳ್ಳವರಿಗಾಗಿ ಲಿಫ್ಟ್ ಅವಳವಡಿಸುವ ಮಾದರಿ ಬಹುಮಾನ ಗಳಿಸಿತ್ತು. ಶಿಕ್ಷಕರಾದ ಸಂಗೀತಾ ಹಾಗೂ ಶೀಧರ್ ಎಂ.ಪಿ ಅವರ ಮಾರ್ಗದರ್ಶನದಲ್ಲಿ ಈ ಮಾದರಿಯನ್ನು ತಯಾರಿಸಲಾಗಿತ್ತು.

ತಿರುಮಲ ಹುದಾರ್ ತಗ್ಗರ್ಸೆಯ ರಾಜು ಹುದಾರ್ ಹಾಗೂ ಭವಾನಿ ದಂಪತಿಗಳ ಪುತ್ರ

Exit mobile version