Kundapra.com ಕುಂದಾಪ್ರ ಡಾಟ್ ಕಾಂ

ಶ್ರೀ ಸಾಯಿ ಮಹಿಳಾ ಸಂಘದಿಂದ ಸದಸ್ಯರಿಗೆ ಮನೆಯಲ್ಲಿಯೇ ಬ್ಯಾಂಕಿಂಗ್ ಸೇವೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀ ಸಾಯಿ ಮಹಿಳಾ ಆರ್ಥಿಕ ಸರಕಾರಿ ಸಂಘ ಮುಳ್ಳಿಕಟ್ಟೆ ಹೊಸಾಡು ಇವರಿಂದ ಕರೋನಾ ರೋಗ ಹರಡುವಿಕೆ ತಡೆಗಟ್ಟುವ ನೆಲೆಯಲ್ಲಿ ಲಾಕ್‌ಡೌನ್ ಘೋಷಣೆಯಾದ ಸಮಯದಿಂದ ತನ್ನ ಸದಸ್ಯರಿಗೆ ಬ್ಯಾಂಕಿಂಗ್ ಸೇವೆಯನ್ನು ಮನೆ ಬಾಗಿಲಿಗೆ ನೀಡುತ್ತಿದೆ.

ಸದಸ್ಯರು ಕರೆಮಾಡಿ ತಿಳಿಸಿದಾಗ ಅವರ ಮನೆಗೆ ಸಂಸ್ಥೆಯ ಸಿಬ್ಬಂದಿಗಳು ಭೇಟಿ ನೀಡಿ ಬ್ಯಾಂಕಿಂಗ್ ಸೇವೆಯನ್ನು ನೀಡುತ್ತಿದ್ದಾರೆ. ಮತ್ತು ಇದೇ ಸಂದರ್ಭದಲ್ಲಿ ಸದಸ್ಯರಿಗೆ ಸಾಮಾಜಿಕ ಅಂತರ, ಪರಿಸರ ಸ್ವಚ್ಚತೆ, ಆದಷ್ಟು ಅನಗತ್ಯ ಸಂಚಾರ ಮಾಡದೇ ಇರುವ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸಂಸ್ಥೆಯ ಸಿಬ್ಬಂದಿಗಳಾದ ಮುಖ್ಯಕಾರ್ಯನಿರ್ವಹಣಾಧಿಕಾರಿ ಭಾಸ್ಕರ್ ಬಿಲ್ಲವ, ರೇಖಾ, ಪ್ರತಿಭಾ, ಗಿರೀಶ್, ಮಂಜುನಾಥ್ ಈ ಸೇವೆ ಸಲ್ಲಿಸುತ್ತಿದ್ದಾರೆ.

ಸಂಸ್ಥೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಈ ಕಾರ್ಯವೈಖರಿಯು ಅಂತ್ಯಂತ ಸಮಯೋಚಿತ ಮತ್ತು ಉಪಯುಕ್ತವಾಗಿದ್ದು ಎಂದು ಸದಸ್ಯರೆಲ್ಲರೂ ಶ್ಲಾಘಿಸುತ್ತಿದ್ದಾರೆ.

Exit mobile version