ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗಂಗೊಳ್ಳಿ ಗ್ರಾಮ, ಗುಜ್ಜಾಡಿ, ತ್ರಾಸಿ, ಮೋವಾಡಿ ಗ್ರಾಮದಲ್ಲಿ 21 ಕೊರಗ ಸಮುದಾಯದ ಕುಟುಂಬಗಳಿಗೆ ಸೋಮವಾರ ಆಹಾರ ಕಿಟ್, ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಲಾಯಿತು.
ಈ ಸಂದರ್ಭ ನಟ ವಜ್ರಾಂಗ್ ಶೆಟ್ಟಿ (ಮಣಿ ಶೆಟ್ಟಿ), ದ.ಸಂ.ಸ ಗಂಗೊಳ್ಳಿ ಶಾಖೆ ಮುಖಂಡರಾದ ಜಗದೀಶ್ ಗಂಗೊಳ್ಳಿ, ಸದಸ್ಯರಾದ ಸಂಪತ್, ಸಚಿನ್, ವಿಶ್ವನಾಥ್, ರಾಘವೇಂದ್ರ, ಸತೀಶ್, ಮಿಥುನ್ ಮೊದಲಾದವರಿದ್ದರು.