Kundapra.com ಕುಂದಾಪ್ರ ಡಾಟ್ ಕಾಂ

ಮುಳ್ಳಿಕಟ್ಟೆ: ಕೊರಗ ಸಮುದಾಯದ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗಂಗೊಳ್ಳಿ ಗ್ರಾಮ, ಗುಜ್ಜಾಡಿ, ತ್ರಾಸಿ, ಮೋವಾಡಿ ಗ್ರಾಮದಲ್ಲಿ 21 ಕೊರಗ ಸಮುದಾಯದ ಕುಟುಂಬಗಳಿಗೆ ಸೋಮವಾರ ಆಹಾರ ಕಿಟ್, ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಲಾಯಿತು.

ಚಿತ್ರನಟ ಚೇತನ್ ಅವರ ಚೇತನ್ ಫೌಂಡೇಶನ್ ಟ್ರಸ್ಟ್ ಹಾಗೂ ಬೆಂಗಳೂರು ಉದ್ಯಮಿಯಾದ ಕೆ.ವಿ ನಾಗರಾಜ್, ಉದ್ಯಮಿ ದಿನೇಶ್ ಮಂಗಳೂರು ಹಾಗೂ ಮುಳ್ಳಿಕಟ್ಟೆ ಸಂಕಲ್ಪ ಕ್ಲಿನಿಕ್ ಮಾಲಕ ಪುಷ್ಪರಾಜ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ಗಂಗೊಳ್ಳಿ ಶಾಖೆ ಸಹಯೋಗದೊಂದಿಗೆ ಕಿಟ್ ವಿತರಿಸಲಾಯಿತು.

ಈ ಸಂದರ್ಭ ನಟ ವಜ್ರಾಂಗ್ ಶೆಟ್ಟಿ (ಮಣಿ ಶೆಟ್ಟಿ), ದ.ಸಂ.ಸ ಗಂಗೊಳ್ಳಿ ಶಾಖೆ ಮುಖಂಡರಾದ ಜಗದೀಶ್ ಗಂಗೊಳ್ಳಿ, ಸದಸ್ಯರಾದ ಸಂಪತ್, ಸಚಿನ್, ವಿಶ್ವನಾಥ್, ರಾಘವೇಂದ್ರ, ಸತೀಶ್, ಮಿಥುನ್ ಮೊದಲಾದವರಿದ್ದರು.

Exit mobile version