Kundapra.com ಕುಂದಾಪ್ರ ಡಾಟ್ ಕಾಂ

ವಿಠಲವಾಡಿ ಶ್ರೀಕಾಂತ ಪೂಜಾರಿ ನೆಣಿಗೆ ಶರಣು

ಕುಂದಾಪುರ: ನಗರದ ವಿಠಲವಾಡಿಯ ಯುವಕನೋರ್ವ ಗುರುವಾರ ಮಧ್ಯಾಹ್ನದ ವೇಳೆಗೆ ತನ್ನ ಮನೆಯ ಮಹಡಿಯಲ್ಲಿ ಆತ್ಮಹತ್ಯೆ ಶರಣಾದ ಘಟನೆ ವರದಿಯಾಗಿದೆ. ಮೃತ ಯುವಕ ಕೆರೆಮನೆ ನಿವಾಸಿ ಶ್ರೀಕಾಂತ ಪೂಜಾರಿ(೨೯) ಎಂದು ಗುರುತಿಸಿಲಾಗಿದೆ.

ಘಟನೆಯ ವಿವರ:

ಎಐಸಿ ರೋಡಿನಲ್ಲಿರುವ ಕೆರೆಮನೆ ನಿವಾಸಿ ಲಕ್ಷ್ಮಣ ಪೂಜಾರಿ ಅವರ ಕೊನೆಯ ಪುತ್ರನಾದ ಶ್ರೀಕಾಂತ ಉತ್ಪನ್ನವೊಂದರ ಡೀಲರ್‌ಶೀಪ್ ಮಾಡಿಕೊಂಡಿದ್ದರು. ಮನೆಯಲ್ಲಿ ಅಸೌಖ್ಯದಿಂದ ಇರುವ ಸಹೋದರನನ್ನು ಹೊರತು ಪಡಿಸಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಅಟ್ಟವನ್ನೇರಿದ ಶ್ರೀಕಾಂತ್ ನೇಣು ಬಿಗಿದುಕೊಂಡಿದ್ದಾರೆ.

ಅವರು ಈ ಹಿಂದೆಯೂ ಎರಡು ಭಾರಿ ಆತ್ಮಹತ್ಯೆಗೆ ಪ್ರಯತ್ನಿಸಿ ವಿಫಲರಾಗಿದ್ದರು ಎನ್ನಲಾಗಿದೆ. ಆದರೆ ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.

ಮೃತರು ತಂದೆ-ತಾಯಿ, ಮೂವರು ಸಹೋದರರು ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಕೆ ನಡೆಸುತ್ತಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

ಶ್ರೀಕಾಂತ ಒಳ್ಳೆಯ ನಡೆತೆಯ ಯುವಕನಾಗಿದ್ದು, ಅಪಾರ ಸ್ನೇಹಿತರನ್ನು ಸಂಪಾದಿಸಿದ್ದ. ಅವರ ಮೃತಪಟ್ಟ ಸುದ್ದಿ ಕೇಳಿದ ಕೂಡಲೇ ನೂರಾರು ಮಂದಿ ಆಸ್ಪತ್ರೆಯ ಬಳಿ ಜಮಾಯಿಸಿದ್ದರು.

Exit mobile version