Kundapra.com ಕುಂದಾಪ್ರ ಡಾಟ್ ಕಾಂ

ಗುಲ್ವಾಡಿ: ಮನೆಯೊಂದರಲ್ಲಿ ಅಕ್ರವಾಗಿ ಕೂಡಿಹಾಕಿದ್ದ ದನಗಳ ರಕ್ಷಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗೋವುಗಳ ಕಳ್ಳತನದ ಆರೋಪಕ್ಕೆ ಸಂಬಂಧಿಸಿದಂತೆ ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿ ಸುಮಾರು 23 ಜಾನುವಾರುಗಳನ್ನು ರಕ್ಷಣೆ ಮಾಡಿರುವ ಘಟನೆ ತಾಲೂಕಿನ ಗುಲ್ವಾಡಿ ಕಾಂಡ್ಲಗದ್ದೆ ಎಂಬಲ್ಲಿ ನಡೆದಿದೆ.

ಗುಲ್ವಾಡಿಯ ಅಬೂಬಕ್ಕರ್ ಎಂಬವರ ಮನೆಗೆ ಜೂನ್ 27ರ ರವಿವಾರ ಪೊಲೀಸ್ ದಾಳಿ ನಡೆಸಿದ್ದು ಸುಮಾರು ರೂ. 55,000 ಮೌಲ್ಯದ 23 ಜಾನುವಾರು ಹಾಗೂ ಜಾನುವಾರು ಕಟ್ಟಲು ಉಪಯೋಗಿಸುತ್ತಿದ್ದ ಹಗ್ಗವನ್ನು ವಶಪಡಿಸಿಕೊಳ್ಳಳಾಗಿದೆ. ಪೊಲೀಸರು ದಾಳಿ ನಡೆಸುತ್ತಿರುವುದು ತಿಳಿಯುತ್ತಿದ್ದಂತೆ ಆಪಾದಿತ ಅಬೂಬಕ್ಕರ್ ಪರಾರಿಯಾಗಿದ್ದಾನೆ. ಗೋ ಕಳ್ಳತನಕ್ಕೆ ಸಂಬಂಧಿಸಿದಂತೆ ಹಿಂದೂಸಂಘಟನೆ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಿಎಸ್ಐ ಸುಧಾ ಪ್ರಭು ಅವರ ನೇತೃತ್ವದಲ್ಲಿ ದಾಳಿ ನಡೆಸಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Exit mobile version