Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪುಂದ ಪದ್ಮನಾಭ ನಾಯಕ್ ಗೆ ಸನ್ಮಾನ

ಬೈಂದೂರು: ನಾಯ್ಕನಕಟ್ಟೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ವೆಂಕಟರಮಣ ಸೇವಾ ಸಮಿತಿಯಿಂದ ವರಮಹಾಲಕ್ಷ್ಮೀ ಪೂಜೆಯ ದಿನದಂದು ಸುತ್ತಮತ್ತಲಿನ ಪರಿಸರದ ಎಲ್ಲಾ ಕಾರ್ಯಕ್ರಮಗಳಲ್ಲಿ ನೀರಾವರಿ ಮಂತ್ರಿ ಎಂದು ಮನೆಮಾತಾಗಿರುವ ಸುಮಾರು 40ವರ್ಷಗಳಿಂದ ಅವಿರತವಾಗಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸ್ವಯಂ ಸೇವಕರಾಗಿ ಸಾಮಾಜಿಕ ಸೇವೆ ಸಲ್ಲಿಸುವುದರೊಂದಿಗೆ ಜನಪ್ರೀಯರಾಗಿರುವ ಉಪ್ಪುಂದದ ಪದ್ಮನಾಭ ನಾಯಕ್ ಇವರಿಗೆ ನಾಯ್ಕನಕಟ್ಟೆ ಶ್ರೀ ವೆಂಕಟರಮಣ ಸೇವಾಸಮಿತಿಯ ವತಿಯಿಂದ ಗುರುತಿಸಿ ಗೌರವ ಪೂರ್ವಕವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಸೇವಾ ಸಮಿತಿಯ ಅಧ್ಯಕ್ಷರಾದ ದಾಮೋದರ ಪ್ರಭು, ಉಪಾಧ್ಯಕ್ಷ ಪುಂಡಲೀಕ ನಾಯಕ್, ಕಾರ್ಯದರ್ಶಿ ರಮೇಶ ಪೈ, ಪ್ರಕಾಶ ಭಟ್, ನಾರಾಯಣ ಶ್ಯಾನುಭಾಗ್ ಉಪ್ರಳ್ಳಿ ಹಾಗೂ ಸಮಿತಿಯ ಸದಸ್ಯರು ಮತ್ತು ವರಮಹಾಲಕ್ಷ್ಮೀ ಸೇವಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಓಂಗಣೇಶ ಉಪ್ಪುಂದ ಇವರು ಸನ್ಮಾನಿತರ ಪರಿಚಯವನ್ನು ವಿಸ್ತಾರವಾಗಿ ವಿವರಿಸಿದರು. ಪ್ರಮೋದ ಪೈ ಸ್ವಾಗತಿಸಿ, ವಂದಿಸಿದರು.

Exit mobile version