Kundapra.com ಕುಂದಾಪ್ರ ಡಾಟ್ ಕಾಂ

ಶಂಕರನಾರಾಯಣ ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದವರು ಭಜನೆ, ಭಾವಗೀತೆ, ವಚನಗಳಂತಹ ಅನ್ಯ ಪ್ರಕಾರಗಳನ್ನು ಸುಲಲಿತವಾಗಿ ಹಾಡಬಹುದು ಎಂದು ಸಂಗೀತ ಗುರು ವಿದ್ವಾನ್ ಸತೀಶ ಭಟ್ ಮಾಳಕೊಪ್ಪ ಹೇಳಿದರು.

ಹಟ್ಟಿಯಂಗಡಿ ಶಂಕರನಾರಾಯಣ ದೇವಸ್ಥಾನದಲ್ಲಿ ಭಾನುವಾರ ಕೃಷ್ಣಾಷ್ಟ್ಟಮಿ ನಿಮಿತ್ತ ಕುಂದಾಪುರದ ಗುರುಪರಂಪರಾ ಸಂಗೀತ ಸಭಾದ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಭಜನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಗೀತ ಸಭಾದ ವಿದ್ಯಾರ್ಥಿಗಳು ಈ ವರೆಗೆ ವಿವಿಧೆಡೆ ನಡೆಯುವ ಬೈಠಕ್‌ಗಳಲ್ಲಿ ಶಾಸ್ತ್ರೀಯ ಸಂಗಿತವನ್ನು ಹಾಡುತ್ತಿದ್ದರು. ಈ ಬಾರಿ ಅವರಿಗೆ ಭಜನೆಗಳನ್ನು ಹಾಡುವ ಅವಕಾಶ ಸಿಕ್ಕಿದೆ. ಹಾಡಿದ ಎಲ್ಲರೂ ತಮ್ಮ ಪ್ರೌಢಿಮೆಯನ್ನು ಸಾದರ ಪಡಿಸಿದ್ದಾರೆ ಎಂದು ಅವರು ಶ್ಲಾಘಿಸಿದರು.

ವಿದ್ವಾನ್ ಸತೀಶ ಭಟ್ ಮತ್ತು ವಿದುಷಿ ಪ್ರತಿಮಾ ಭಟ್ ದಂಪತಿಯ ಶಿಷ್ಯರಾದ ಜಾಹ್ನವಿ, ವಂದಿತಾ, ವೇದಿತಾ, ಈಶ್ವರಿ, ಸಂಕಲ್ಪಕುಮಾರ್, ಚಿಂತನಾ ಧನ್ಯ, ಕೇದಾರ ಮರವಂತೆ, ನಾಗರಾಜ ಭಟ್, ವೀಣಾ ನಾಯಕ್, ಚಿನ್ಮಯಿ ಧನ್ಯ, ಪ್ರಮೀಳಾ ಕುಂದಾಪುರ ಭಜನೆಗಳನ್ನು ವಿವಿಧ ರಾಗಗಳಲ್ಲಿ ಹಾಡಿದರು. ಶ್ರೀಧರ ಭಟ್ ಹಾರ್ಮೋನಿಯಂ, ಶಶಿಕಿರಣ ಮಣಿಪಾಲ ತಬಲಾ ನುಡಿಸಿದರು. ಕಾರ್ಯಕ್ರಮ ಸಂಘಟಿಸಿದ ಗಾಯಕಿ ಪ್ರಮೀಳಾ ಕುಂದಾಪುರ ಸ್ವಾಗತಿಸಿ, ವಂದಿಸಿದರು.

Exit mobile version