Kundapra.com ಕುಂದಾಪ್ರ ಡಾಟ್ ಕಾಂ

100% ಕೋವಿಡ್ ವ್ಯಾಕ್ಸಿನೇಷನ್: ಕಾವ್ರಾಡಿ & ಬಳ್ಕೂರು ಗ್ರಾಮಕ್ಕೆ ಪ್ರಶಂಸನಾ ಪತ್ರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕುಂದಾಪುರ ತಾಲೂಕಿನ ಕಾವ್ರಾಡಿ ಹಾಗೂ ಬಳ್ಕೂರು ಗ್ರಾಮಗಳಲ್ಲಿ ಪ್ರತಿಶತ ನೂರರಷ್ಟ ಕೊರೊನಾ ನಿರೋಧಕ ಚುಚ್ಚುಮದ್ದು ಪೂರ್ಣಗೊಳಿಸಿ ಸಾಧಿಸಿದ ಹಿನ್ನೆಲೆ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಕಂಡ್ಲೂರು ವೈದ್ಯಾಧಿಕಾರಿ ಡಾ ಲತಾ ನಾಯಕ್ ಅವರಿಗೆ ಪ್ರಶಂಸನಾ ಪತ್ರಗಳನ್ನು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ. ಸುನಿಲ್ ಕುಮಾರ್ರವರು ವಿತರಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ. ಕೂರ್ಮಾ ರಾವ್, ಉಡುಪಿ ಶಾಸಕ ಕೆ. ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಉಪಸ್ಥಿತರಿದ್ದರು.

Exit mobile version