Kundapra.com ಕುಂದಾಪ್ರ ಡಾಟ್ ಕಾಂ

ಜೆಸಿಐ ಉಪ್ಪಂದಕ್ಕೆ ಔಟ್ ಸ್ಟ್ಯಾಂಡಿಂಗ್ ಘಟಕ ಪ್ರಶಸ್ತಿ ಹಾಗೂ ಚಾಂಪಿಯನ್ ಆಪ್ ಚಾಂಪಿಯನ್ ಪ್ರಶಸ್ತಿ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು:
ವಿಟ್ಲದಲ್ಲಿ ನಡೆದ ಜೆಸಿಐ ಭಾರತ ವಲಯ 15ರ ಬೆಳವಣಿಗೆ ಮತ್ತು ಅಭಿವೃದ್ಧಿ ವಿಭಾಗದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಉಪ್ಪುಂದ ಜೇಸಿ ಘಟಕ ಈ ವರ್ಷ ಜೇಸಿಐ ಭಾರತ ಫೌಂಡೇಶನ್ ಗೆ ನೀಡಿದ ದೇಣಿಗೆ ಹಾಗೂ ಸದಸ್ಯತ್ವ ವಿಭಾಗದಲ್ಲಿ ತೋರಿದ ಬೆಳವಣಿಗೆಯನ್ನು ಜೆಸಿಐ ಪರಿಗಣಿಸಿ ವಲಯ 15ರ ಔಟ್ ಸ್ಟ್ಯಾಂಡಿಂಗ್ ಘಟಕ ಪ್ರಶಸ್ತಿ ಹಾಗೂ ಚಾಂಪಿಯನ್ ಅಪ್ ಚಾಂಪಿಯನ್ ಪ್ರಶಸ್ತಿ ದೊರಕಿದೆ.

ರಾಷ್ಟ್ರೀಯ ಅಧ್ಯಕ್ಷರಾದ ಜೆಸಿಐ ಸೆನೆಟರ್ ರಾಕಿ ಜೈನ್ ಪ್ರಧಾನಿಸಿ ಗೌರವಿಸಿದರು . ಈ ಸಂಧರ್ಭ ವಲಯ 15ರ ಅಧ್ಯಕ್ಷರಾದ ಸೌಜನ್ಯ ಹೆಗ್ಡೆ, ರಾಷ್ಟ್ರೀಯ ನಿರ್ದೇಶಕರಾದ ಕಾರ್ತಿಕೇಯ, ಮಧ್ಯಸ್ಥ ಹಾಗೂ ವಲಯ ಉಪಾಧ್ಯಕ್ಷರಾದ ದೇವರಾಯ ದೇವಾಡಿಗ, ಜೆಸಿಐ ಉಪ್ಪುಂದದ ಸೆನೆಟರ್ ಯು. ಪ್ರಕಾಶ್ ಭಟ್, ವಲಯಾಧಿಕಾರಿಯಾದ ಸುಬ್ರಹ್ಮಣ್ಯ ಜಿ . ಉಪ್ಪುಂದ, ಪ್ರದೀಪ್ ಶೆಟ್ಟಿ ಕಾರಿಕಟ್ಟೆ, ನಾಗಾರಾಜ್ ಪೂಜಾರಿ, ಮೊದಲಾದವರು ಉಪಸ್ಥಿತರಿದ್ದರು.

Exit mobile version