Kundapra.com ಕುಂದಾಪ್ರ ಡಾಟ್ ಕಾಂ

ಭಾರತೀಯ ವೈದ್ಯಕೀಯ ಸಂಘ ಕುಂದಾಪುರ: ನೂತನ ಪಧಾದಿಕಾರಿಗಳ ಪದಗ್ರಹಣ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಭಾರತೀಯ ವೈದ್ಯಕೀಯ ಸಂಘ ಕುಂದಾಪುರ ಶಾಖೆಯ 21-22ನೇ ಸಾಲಿನ ನೂತನ ಪಧಾದಿಕಾರಿಗಳ ಪದಗ್ರಹಣ ಸಮಾರಂಭ ಇಲ್ಲಿನ ಹೋಟೆಲ್ ಶೆರೋನ್‌ನಲ್ಲಿ ನಡೆಯಿತು.

ಕುಂದಾಪುರದ ಎಲುಬು ಕೀಲು ತಜ್ಞರಾದ ಡಾ. ಸಂದೀಪ ನಾವಡ ಅವರು ಸಂಸ್ಥೆಯ ಅಧ್ಯಕ್ಷರಾಗಿ, ಮನೋರೋಗ ತಜ್ಞ ಡಾ. ರವೀಂದ್ರ ಮನೋಳಿ ಕಾರ್ಯದರ್ಶಿಯಾಗಿ, ಮಕ್ಕಳ ತಜ್ಞ ಡಾ. ಗಣೇಶ್ ಪ್ರಸಾದ್ ಕಾಮತ್ ಖಜಾಂಚಿಯಾಗಿ ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭ ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಪದಗ್ರಹಣ ಅಧಿಕಾರಿ ಡಾ. ಭಾಸ್ಕರಾನಂದ ಕುಮಾರ, ಡಾ. ಕೆ.ಎಸ್ ಕಾರಂತ್, ಡಾ. ಬಿ.ವಿ ಉಡುಪ, ಡಾ. ಶ್ರೀದೇವಿ ಕಟ್ಟೆ ಡಾ. ಪ್ರಮೀಳಾ ನಾಯಕ್ ಡಾ. ರೆನಿ ವಿಲ್ಸನ್ ಉಪಸ್ಥಿತರಿದ್ದರು.

Exit mobile version