Kundapra.com ಕುಂದಾಪ್ರ ಡಾಟ್ ಕಾಂ

ವಂಡ್ಸೆ ಶ್ರೀ ಬ್ರಹ್ಮಶ್ರೀ ಸೌಹಾರ್ದ ಸಹಕಾರಿ: ಅಧ್ಯಕ್ಷರಾಗಿ ಕೆ. ಬಸವರಾಜ್ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ವಂಡ್ಸೆ ಶ್ರೀ ಬ್ರಹ್ಮಶ್ರೀ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿಯ ನೂತನ ಆಯ್ಕೆ ಪಕ್ರಿಯೆ ಇತ್ತಿಚೆಗೆ ನಡೆಯಿತು. ಅಧ್ಯಕ್ಷರಾಗಿ ಕೆ. ಬಸವರಾಜ್ ರಾಯಪ್ನಾಡಿ ಮತ್ತು ಉಪಾಧ್ಯಕ್ಷರಾಗಿ ವೆಂಕಟೇಶ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಿರ್ದೇಶಕರಾಗಿ ಶಿವರಾಮ ಶೆಟ್ಟಿ ವಂಡ್ಸೆ, ಉದಯ ಕೆ. ನಾಯ್ಕ ವಂಡ್ಸೆ, ಉದಯ ಕೆ. ನಾಯ್ಕ ವಂಡ್ಸೆ, ರವೀಂದ್ರ ಎಸ್. ಬಂಗೇರ ಕುಂದಾಪುರ, ಶಂಕರ್ ಗಾಣಿಗ ಹೋಸಾಡು, ಜಲಜ ಪೂಜಾರಿ ಮಾವಿನಕಟ್ಟೆ, ಶಶಿಕಲಾ ಎಸ್. ವಂಡ್ಸೆ, ಚಂದ್ರ ರಾಯಪ್ನಾಡಿ, ದಿವಾಕರ ವಂಡ್ಸೆ, ದೇವು ಮೆಂಡನ್ ರಾಯಪ್ನಾಡಿ, ನಾಗರಾಜ ಪುತ್ರನ್ ಅಂಬ್ಲಾಡಿ, ಹರೀಶ್ ನಾಯ್ಕ್ ವಂಡ್ಸೆ ಆಯ್ಕೆಯಾಗಿದ್ದಾರೆ.

ಈ ಸಂದರ್ಭ ಸಹಕಾರಿ ಕಾನೂನು ಸಲಹೆಗಾರರಾದ ಉಮೇಶ್ ಶೆಟ್ಟಿ, ಸತ್ಯನಿಧಿ ಸಂಗ್ರಾಹಕ ಗುರುರಾಜ ಗಾಣಿಗ ಉಪಸ್ಥಿತರಿದ್ದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಆರ್. ಸಂತೋಷ ಸ್ವಾಗತಿಸಿದರು. ಶಾಖಾ ಸಿಬ್ಬಂದಿ ಅಭಿಷೇಕ್ ವಂದಿಸಿದರು.

Exit mobile version