Kundapra.com ಕುಂದಾಪ್ರ ಡಾಟ್ ಕಾಂ

2021ನೇ ಸಾಲಿನ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ:
2021ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದ್ದು ವಿವಿಧ ಕ್ಷೇತ್ರಗಳ ಒಟ್ಟು 35 ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ.

ಈ ಪೈಕಿ ಕುಂದಾಪುರ ತಾಲೂಕಿನ ಡಾ. ದಿನೇಶ್ ಶೆಟ್ಟಿ ಅವರಿಗೆ ಸಂಕೀರ್ಣ ಕ್ಷೇತ್ರದಲ್ಲಿ, ಕೆ. ತಿಲಕರಾಜ್ ಬಳ್ಕೂರು ಅವರಿಗೆ ರಂಗಭೂಮಿ ಕ್ಷೇತ್ರದಲ್ಲಿ ಸಾಯಿನಾಥ್ ಶೇಟ್ ಅವರಿಗೆ ಸಮಾಜ ಸೇವೆ ಕ್ಷೇತ್ರ, ಶಿವಾನಂದ ತಲ್ಲೂರು ಅವರಿಗೆ ಸಮಾಜ ಸೇವೆ ಕ್ಷೇತ್ರ, ಡಾ. ಪಾರ್ವತಿ ಜಿ. ಐತಾಳ್ ಅವರಿಗೆ ಸಾಹಿತ್ಯ ಕ್ಷೇತ್ರ, ಆರಾಧ್ಯ ಎಸ್. ಶೆಟ್ಟಿ ಅವರಿಗೆ ಕಲಾ ಕ್ಷೇತ್ರದಲ್ಲಿ ಪ್ರಶಸ್ತಿ ದೊರೆತಿದೆ.

ಬೈಂದೂರು ತಾಲೂಕಿನ ರಾಮ ಟೈಲರ್ ಅವರಿಗೆ ರಂಗಭೂಮಿ ಕ್ಷೇತ್ರದಲ್ಲಿ, ಬಾಲಕೃಷ್ಣ ಮದ್ದೋಡಿ ಅವರಿಗೆ ಸಾಮಾಜಿಕ ಸೇವಾ ಕ್ಷೇತ್ರ, ಶ್ರೀಧರ ಗಾಣಿಗ ಉಪ್ಪುಂದ ಯಕ್ಷಗಾನ ಕ್ಷೇತ್ರ, ಕುಷ್ಟ ಕೊರಗ ಹೇರೂರು ಕಲಕುಶಲ ಕ್ಷೇತ್ರ, ಎನ್. ರಮಾನಂದ ಪ್ರಭು ಅವರಿಗೆ ಸಮಾಜ ಸೇವೆ ಕ್ಷೇತ್ರದಲ್ಲಿ ಪ್ರಶಸ್ತಿ ದೊರೆತಿದೆ.

ವಿವಿಧ ಕ್ಷೇತ್ರದಲ್ಲಿ ಪ್ರಶಸ್ತಿ ಪಡೆದ ಜಿಲ್ಲೆಯ ಸಾಧಕರು ಹಾಗೂ ಸಂಘಗಳ ವಿವರ ಈ ಕೆಳಗಿನಂತಿದೆ.

Exit mobile version