ಕುಂದಾಪುರ: ಕುಂದಾಪುರ ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ ವತಿಯಿಂದ ಇಂಜೀನಿಯರ್ಸ್ ದಿನಾಚರಣೆ ಪ್ರಯುಕ್ತ ಕೋಟಾದ ನಿವಾಸಿ ನಿವೃತ್ತ ಎಕ್ಸಿಕ್ಯೂಟಿವ್ ಇಂಜೀನಿಯರ್ ಮಂಜುನಾಥ್ ನಾಯರಿ ಇವರನ್ನು ಅವರ ಸ್ವಗೃಹದಲ್ಲಿ ಗೌರವಿಸಿ ಸಮ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಲಯನ್ಸ್ ಅಧ್ಯಕ್ಷ ಕೆ. ಅಶೋಕ್ ಬೆಟ್ಟಿನ್, ಖಜಾಂಚಿ ನಾಗರಾಜ್ ಶೇಟ್, ಹಿರಿಯ ಸದಸ್ಯ ನಾರಾಯಣ ಶೆಟ್ಟಿ, ರಮಾನಂದ, ಪ್ರಕಾಶ್ ಬೆಟ್ಟಿನ್, ರಾಜೀವ್ ಕೋಟ್ಯಾನ್, ನಿರಂತನ್, ಜಯರಾಮ್ ಪಿ. ಕಲ್ಪತರು ಚಂದ್ರಶೇಖರ್, ಜಯಪ್ರಕಾಶ್, ಸಚ್ಚಿದಾನಂದ ಶೆಟ್ಟಿ, ವೇಣುಗೋಪಾಲ್ ಶೆಟ್ಟಿ ಮತ್ತು ಲಯನೆಸ್ ಅಧ್ಯಕ್ಷ ಬಿಂದಿಯ ಬೆಟ್ಟಿನ್, ಖಜಾಂಚಿ ಸುನೀತಾ ಶೇಟ್ ಉಪಸ್ಥಿತರಿದ್ದರು.