Site icon Kundapra.com ಕುಂದಾಪ್ರ ಡಾಟ್ ಕಾಂ

ಆತ್ರಾಡಿ: ವಿಜಯ ಮಕ್ಕಳ ಕೂಟದಲ್ಲಿ ಸೈಬರ್ ಕ್ರೈಂ ಜಾಗ್ರತಿ ಶಿಬಿರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ವಂಡ್ಸೆ ಆತ್ರಾಡಿಯ ವಿಜಯ ಮಕ್ಕಳ ಕೂಟದಲ್ಲಿ ಅಂಪಾರು ರೋಟರಿ ಕ್ಲಬ್ ಸಹಯೋಗದಲ್ಲಿ ಸೈಬರ್ ಕ್ರೈಂ ಜಾಗ್ರತಿ ಶಿಬಿರ ಇತ್ತೀಚೆಗೆ ನಡೆಯಿತು.

ಯುವಜನ ಸಬಲೀಕರಣದ ಕುರಿತು ನರಸಿಂಹ ಗಾಣಿಗ ಹೆಮ್ಮಾಡಿ ವಿದ್ಯಾರ್ಥಿಗಳುನ್ನುದ್ದೇಶಿಸಿ ಮಾತನಾಡಿದರು. ಹೊಸಂಗಡಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ರಂಜಿತ್‌ಕುಮಾರ್ ಶೆಟ್ಟಿ ಸೈಬರ್‌ಕ್ರೈಂಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಅಂಪಾರು ರೋಟರಿ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ವಹಿಸಿದರು. ವಿ.ಎಂ.ಕೆ ಪೋಷಕ ಸಂಘದ ಅಧ್ಯಕ್ಷರಾದ ಬಗ್ವಾಡಿ ಚಂದ್ರಶೆಟ್ಟಿ, ಇಂಟರ‍್ಯಾಕ್ಟ್ ಅಧ್ಯಕ್ಷೆ ದೀಕ್ಷಿತಾ ದೇವಾಡಿಗ, ಕಾರ್ಯದರ್ಶಿ ಸ್ವರ್ಣ ಉಪಸ್ಥಿತರಿದ್ದರು.

ಸಂಸ್ಥೆಯ ಮುಖೋಪಾಧ್ಯಾಯಿನಿ ದೀಪಿಕಾ ಸುಭಾಸ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿ ಟಿ.ಕೆ. ನಂದಾ ಕಾರ‍್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಆಶ್ರಿತ್ ವಂದಿಸಿದರು.

Exit mobile version