Kundapra.com ಕುಂದಾಪ್ರ ಡಾಟ್ ಕಾಂ

ಕೋಟೇಶ್ವರ: ರೋಟರಿ ಬಸ್ಸು ತಂಗುದಾಣ ಲೋಕಾರ್ಪಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಅಂತರಾಷ್ಟ್ರೀಯ ಮಟ್ಟದ ಸಂಸ್ಥೆ ರೋಟರಿ ಸಂಸ್ಥೆ. ಈಗಾಗಲೇ ಜಗತ್ತಿನದ್ಯಾಂತ ಸಾಕಷ್ಟು ಬಹುತೇಕ ಜನೋಪಯೋಗಿ ಸೇವೆಗಳನ್ನು ನೀಡುವ ಮೂಲಕ ರೋಟರಿ ಸಂಸ್ಥೆಯು ಜನಮಾನಸವಾಗಿ ಉಳಿದಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ರೋಟರಿ ಕ್ಲಬ್ ನೇತೃತ್ವದಲ್ಲಿ ನಿರ್ಮಾಣ ಮಾಡಲಾದ ಈ ಸುಸಜ್ಜಿತ ಬಸ್ಸು ತಂಗುದಾಣ ಪ್ರಯಾಣಿಕರ ದಣಿವನ್ನು ನಿವಾರಿಸಿದೆ. ಈ ತಂಗುದಾಣವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಕೋಟೇಶ್ವರ ರೋಟರಿ ಕ್ಲಬ್ ಮತ್ತು ಪ್ರಯೋಜಕರ ಕಾರ‍್ಯ ಶ್ಲಾಘನೀಯವಾಗಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಎಂ.ಜಿ.ರಾಮಚಂದ್ರಮೂರ್ತಿ ಹೇಳಿದರು.

ಅವರು ಕೋಟೇಶ್ವರ ರೋಟರಿ ಕ್ಲಬ್ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ೬೬ ರ ರಿಲಿಯನ್ಸ್ ಮಾಲ್ ಎದುರು ನೂತನವಾಗಿ ನಿರ್ಮಿಸಲಾದ ಬಸ್ಸು ತಂಗುದಾಣವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪಿಡಿಜಿ ಅಭಿನಂದನ್ ಶೆಟ್ಟಿ, ಕೋಟೇಶ್ವರ ಪಂಚಾಯತ್ ಅಧ್ಯಕ್ಷ ಕೃಷ್ಣಗೊಲ್ಲ, ಬಸ್ಸು ನಿಲ್ದಾಣದ ಪ್ರಯೋಜಕರಾದ ಉದ್ಯಮಿ ಸಹನಾ ಸುರೇಂದ್ರ ಶೆಟ್ಟಿ, ಅಕ್ಷಯ ಶೇಟ್, ವಲಯ ೨ರ ಅಸಿಸ್ಟೆಂಟ್ ಗರ್ವನರ್ ಧನಂಜಯ ಪ್ರಭು, ವಲಯ ೧ರ ಎಜಿ ಕೆ.ಕೆ.ಕಾಂಚನ್, ಜೆ.ಪಿ.ಶೆಟ್ಟಿ, ಝೋನೆಲ್ ಲಿಫ್ಟಿನೆಂಟ್ ಸುಧಾಕರ್ ಶೆಟ್ಟಿ, ರೋಟರಿ ಕಮ್ಯೂನಿಟಿ ಸರ್ವೀಸ್ ಕ್ಲಬ್ ಡೈರಕ್ಟರ್ ರವೀಂದ್ರ ಶೆಟ್ಟಿ, ರೋಟರಿ ಕಾರ‍್ಯದರ್ಶಿ ಪ್ರಭಾಕರ ಬಿ ಕುಂಭಾಸಿ ಮತ್ತಿತರರು ಉಪಸ್ಥಿತರಿದ್ದರು.

ರೋಟರಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಸ್ವಾಗತಿಸಿದರು. ಕಾರ‍್ಯದರ್ಶಿ ಪ್ರಭಾಕರ್ ಬಿ ಕುಂಭಾಸಿ ಕಾರ‍್ಯಕ್ರಮ ನಿರೂಪಿಸಿದರು. ನಾಗೇಶ್ ಶೆಟ್ಟಿಗಾರ್ ವಂದಿಸಿದರು.

Exit mobile version