Kundapra.com ಕುಂದಾಪ್ರ ಡಾಟ್ ಕಾಂ

ಅಂತರ್ವನಮ್ – ಸದಾನಂದ ಕಾನ್ಫರೆನ್ಸ್ ಹಾಲ್ ಲೋಕಾರ್ಪಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು:
ಇಲ್ಲಿಗೆ ಸಮೀಪದ ಹಾಲ್ಕಲ್‌ನಲ್ಲಿರುವ ಅಂತರ್ವನಮ್ ಹೋಮ್‌ಸ್ಟೇನಲ್ಲಿ ಸದಾನಂದ ಕಾನ್ಫರೆನ್ಸ್ ಹಾಲ್‌ನ್ನು ಸಂಸದ ಬಿ. ವೈ. ರಾಘವೇಂದ್ರ ಉದ್ಘಾಟಿಸಿದರು.

ಈ ಸಂದರ್ಭ ಸಂಸದರು ಮಾತನಾಡಿ, ಸದಾ ಕ್ರೀಯಾಶೀಲವಾಗಿ ಊರಿನ ಅಭಿವೃದ್ಧಿಯ ಬಗ್ಗೆ ತೊಡಗಿಸಿಕೊಳ್ಳುವ ವೆಂಕಟೇಶ ಕಿಣಿ ಅವರು, ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡುವ ಬಗ್ಗೆ ಯಾವಾಗಲೂ ಬೇಡಿಕೆ ಇರಿಸುತ್ತಾರೆ. ಇಂತಹ ಜನಪರ ಕಾಳಜಿ ಇರುವ ವ್ಯಕ್ತಿಗಳಿಂದ ಸಲಹೆ ನೀಡುವುದರಿಂದ ಒಂದಿಷ್ಟು ಉತ್ತಮ ಯೋಜನೆಗಳ ಅನುಷ್ಠಾನ ಸಾಧ್ಯವಾಗುತ್ತದೆ ಎಂದರು.

ಶಾಸಕರಾದ ಬಿ. ಎಂ. ಸುಕುಮಾರ ಶೆಟ್ಟಿ, ಬಿಜೆಪಿ ಬೈಂದೂರು ಕ್ಷೇತ್ರಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿ ಕೃಷ್ಣಪ್ರಸಾದ್ ಅಡ್ಯಂತಾಯ, ಜಿಪಂ ಮಾಜಿ ಸದಸ್ಯ ಸುರೇಶ್ ಬಟ್ವಾಡಿ, ಸದಾಶಿವ ಡಿ. ಪಡುವರಿ, ಆರ್.ಎಸ್. ವೆಂಚರ್ಸ್ನ ರಾಜೀವ ಕುಮಾರ್, ಅಂತರ್ವನಮ್ ಮಾಲಕರಾದ ಕೆ. ವೆಂಕಟೇಶ ಕಿಣಿ ಮೊದಲಾದವರು ಉಪಸ್ಥಿತರಿದ್ದರು.

Exit mobile version