Kundapra.com ಕುಂದಾಪ್ರ ಡಾಟ್ ಕಾಂ

ಭತ್ತದ ನಾಟಿ ಮಾಡಿದ ಶುಭದಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕಿರಿಮಂಜೇಶ್ವರದ ಶುಭದಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳು ಹೆರಂಜಾಲಿನ ಪ್ರಗತಿಪರ ಕೃಷಿಕರಾದ ಗಣಪ ದೇವಾಡಿಗ ಅವರ ಕೃಷಿಭೂಮಿಯಲ್ಲಿ ಸ್ವಯಂ ಪ್ರೇರಿತರಾಗಿ ತುಂತುರು ಮಳೆಯಲ್ಲಿ ಭತ್ತದ ಪೈರುಗಳನ್ನು ನಾಟಿಮಾಡಿ ಕೃಷಿ ಕಾಯಕದ ಅನುಭವ ಪಡೆದುಕೊಂಡರು.

ಕೃಷಿಭೂಮಿಯ ಮಾಲಕರಿಂದ ಭತ್ತದ ನೇಜಿ ಹಾಗೂ ಕೃಷಿ ಚಟುವಟಿಕೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆದರು. ಮುಖ್ಯಶಿಕ್ಷಕ ರವಿದಾಸ್ ಶೆಟ್ಟಿ, ಆಡಳಿತ ಮಂಡಳಿಯ ಸದಸ್ಯರಾದ ಆರ್ ಕೆ ಬಿಲ್ಲವ, ಶಿಕ್ಷಕಿಯರಾದ ರೋಸಮ್ಮ, ಗಾಯತ್ರಿ , ಪ್ರೀತಮ್ ಶೆಟ್ಟಿ, ಅನಿತಾ ಮತ್ತು ಬೋಧಕೇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Exit mobile version