Kundapra.com ಕುಂದಾಪ್ರ ಡಾಟ್ ಕಾಂ

ನಾಗರಾಜ ಪಾಣ, ಕನರಾಡಿ, ಹಂದಾಡಿ, ಗುಲ್ವಾಡಿ ಸೇರಿದಂತೆ 36 ಮಂದಿಗೆ ಜಿಲ್ಲಾ ರಾಜ್ಯೋತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: 2
022ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದ್ದು, ಈ ಭಾರಿ 36 ಮಂದಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಈ ಪೈಕಿ ಕುಂದಾಪುರ ತಾಲೂಕಿನ ನಾಗರಾಜ ಪಾಣ (ದೈವಾರಾಧನೆ), ಮಹಿಮಾ ಕುಂದಾಪುರ (ಬಾಲಪ್ರತಿಭೆ), ಯಾಕೂಬ್ ಖಾದರ್ ಗುಲ್ವಾಡಿ (ಸಾಹಿತ್ಯ), ಬೈಂದೂರು ತಾಲೂಕಿನ ರಾಮಯ್ಯ ಬಳೆಗಾರ (ಯಕ್ಷಗಾನ), ಸುರೇಂದ್ರ ಮೊಗವೀರ (ಯಕ್ಷಗಾನ) ಬ್ರಹ್ಮಾವರ ತಾಲೂಕಿನ ಮನು ಹಂದಾಡಿ (ರಂಗಭೂಮಿ), ಜಾನಕಿ ಹಂದೆ (ಕೃಷಿ), ರಾಘವೇಂದ್ರ ಶೆಟ್ಟಿ ಗಿಳಿಯಾರು (ಜನಪದ) ಸೇರಿದಂತೆ ವಿವಿಧ ಕ್ಷೇತ್ರಗಳ ಒಟ್ಟು 36 ಸಾಧಕರನ್ನು ಸನ್ಮಾನಕ್ಕೆ ಆಯ್ಕೆ ಮಾಡಲಾಗಿದೆ.

2022ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ

  1. ಕಾರ್ಕಳ “ಶ್ರೀ ಲೋಕು ಪೂಜಾರಿ – ದೈವಾರಾಧನೆ
    2 ಕುಂದಾಪುರ “ಶ್ರೀ ನಾಗರಾಜ ಪಾಣ -ದೈವಾರಾಧನೆ
    3 ಬೈಂದೂರು “ಶ್ರೀ ರಾಮಯ್ಯ ಬಳೆಗಾರ ಯಕ್ಷಗಾನ
    4 ಕಾಪು “ಶ್ರೀ ಗಿರೀಶ್ ಫಲಿಮಾರು -ಯಕ್ಷಗಾನ/ ರಂಗಭೂಮಿ
    5 ಬ್ರಹ್ಮಾವರ “ಶ್ರೀ ಮನು ಹಂದಾಡಿ -ರಂಗಭೂಮಿ
    6 ಕಾಪು “ಶ್ರೀ ರಾಜ ಕಟಪಾಡಿ -ರಂಗಭೂಮಿ
    7 ಬೈಂದೂರು “ಶ್ರೀ ಸುರೇಂದ್ರ ಮೊಗವೀರ -ಯಕ್ಷಗಾನ
    8 ಬ್ರಹ್ಮಾವರ “ಶ್ರೀಮತಿ ಜಾನಕಿ ಹಂದೆ – ಬ್ರಹ್ಮಾವರಕೃಷಿ/ ಹೈನುಗಾರಿಕೆ
    9 ಕಾರ್ಕಳ “ಶ್ರೀ ಬಾಬು ಕೆ – ಸಾಹಿತ್ಯ
    10 ಉಡುಪಿ “ಶ್ರೀ ಕೆ ಮಂಜಪ್ಪ ಸುವರ್ಣ -ಸಂಗೀತ
    11 ಉಡುಪಿ “ಶ್ರೀಮತಿ ಸುಚಿತಾ ಪೈ – ಸಂಗೀತ
    12 ಉಡುಪಿ “ಶ್ರೀ ನಾರಾಯಣ ಬಿಳಿರಾಯ – ಪಾಕತಜ್ಞರು
    13 ಕಾಪು “ಶ್ರೀ ಎಲ್ಲೂರು ವೆಂಕಟೇಶ್ ದೇವಾಡಿಗ -ಪಾಕತಜ್ಞರು
    14 ಕಾಪು “ಶ್ರೀ ಎ ರಾಮಚಂದ್ರ ಆಚಾರ್ಯ – ಪತ್ರಕರ್ತರು
    15 ಕಾಪು “ಶ್ರೀ ಮಹೇಶ ಮರ್ಣೆ – ಕಲೆ
    16 ಕಾರ್ಕಳ “ಶ್ರೀ ಗಣೇಶ ನಾಯಕ್‌ ಎಣ್ಣೆಹೊಳೆ – ಕಲೆ
    17 ಉಡುಪಿ “ಪ್ರೋ ಕನರಾಡಿ ವಾದಿರಾಜ ಭಟ್ – ಸಂಕೀರ್ಣ
    18 ಉಡುಪಿ “ಶ್ರೀಮತಿ ಕಮಲಮ್ಮ – ಗೋಸಾಕಣೆ /ಕೃಷಿ
    19 ಉಡುಪಿ “ಡಾ ಉಷಾ ಚಡಗ – ಸಂಕೀರ್ಣ
    20 ಉಡುಪಿ “ಶ್ರೀ ದಯಾನಂದ ಶೆಟ್ಟಿ – ಸಂಕೀರ್ಣ
    21 ಕಾರ್ಕಳ “ಶ್ರೀ ಕೆ ಸುಬ್ರಹ್ಮಣ್ಯ ಆಚಾರ್ಯ – ಸಂಕೀರ್ಣ
    22 ಬ್ರಹ್ಮಾವರ “ಶ್ರೀ ರಾಘವೇಂದ್ರ ಶೆಟ್ಟಿ ಗಿಳಿಯಾರು – ಜಾನಪದ
    23 ಕಾಪು “ಶ್ರೀ ಹರೀಶ್ ಕುಮಾರ್ – ಜಾನಪದ
    24 ಉಡುಪಿ “ಶ್ರೀ ಈಶ್ವರ ಮಲ್ಪೆ – ಸಮಾಜ ಸೇವೆ
    25 ಕಾರ್ಕಳ “ಶ್ರೀ ಟಿ ರಾಮಚಂದ್ರ ನಾಯಕ್ – ಸಮಾಜ ಸೇವೆ
    26 ಹೆಬ್ರಿ “ಶ್ರೀ ಐತು ಕುಲಾಲ್ -ಸಮಾಜ ಸೇವೆ
    27 ಕುಂದಾಪುರ “ಕು ಮಹಿಮಾ – ಬಾಲ ಪ್ರತಿಭೆ
    28 ಉಡುಪಿ “ಶ್ರೀ ಅಭಿನ್ ದೇವಾಡಿಗ – ಕ್ರೀಡೆ
    29 ಉಡುಪಿ ಟೀಮ್ ನೇಷನ್‌ ಫಸ್ಟ್ – ಸಂಘ ಸಂಸ್ಥೆ
    30 ಕಾರ್ಕಳ “ಶ್ರೀ ಶಾರದ ಪೂಜಾ ಸಮಿತಿ (ರಿ) – ಸಂಘ ಸಂಸ್ಥೆ
    31 ಕುಂದಾಪುರ ಶ್ರೀ ಯಾಕುಬ್‌ ಗುಲ್ವಾಡಿ – ಸಾಹಿತ್ಯ
    32 ಕಾರ್ಕಳ ಡಾ. ಸುನಿಲ್‌ – ವೈದ್ಯಕೀಯ ಕ್ಷೇತ್ರ
    33 ಉಡುಪಿ ಶ್ರೀ ಜೂಲಿಯನ್‌ ದಾಂತಿ – ಕೃಷಿ
    34 ಕಾಪು “ಶ್ರೀ ನೀಲಾಧರ ಶೇರಿಗಾರ- ಸಂಗೀತ – ಕ್ರೀಡೆ
    36 ಉಡುಪಿ “ಶ್ರೀಮತಿ ಅರುಣಕಲಾ ಎಸ್ ರಾವ್ – ಕ್ರೀಡೆ

ಇದನ್ನೂ ಓದಿ: ► ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ಸುಬ್ರಹ್ಮಣ್ಯ ಧಾರೇಶ್ವರ ಸೇರಿದಂತೆ ಜಿಲ್ಲೆಯ ಐವರಿಗೆ ರಾಜ್ಯೋತ್ಸವ ಪ್ರಶಸ್ತಿ – https://kundapraa.com/?p=62937 .

Exit mobile version