Kundapra.com ಕುಂದಾಪ್ರ ಡಾಟ್ ಕಾಂ

ತಗ್ಗರ್ಸೆ ಬ್ರಹ್ಮದೇವರ ವಠಾರದ ಶಾರದೋತ್ಸವ ಸಮಿತಿ ಅಧ್ಯಕ್ಷರಾಗಿ ಗೋವಿಂದರಾಜ್ ಆಯ್ಕೆ

Govindaraj acharyaಬೈಂದೂರು: ಇಲ್ಲಿನ ತಗ್ಗರ್ಸೆ ಶ್ರೀ ಬ್ರಹ್ಮದೇವರ ವಠಾರದ ಶ್ರೀ ನಾಗಬನದಲ್ಲಿ ಅ.19ರಿಂದ 21ರವರೆಗೆ ಜರುಗುವ 26ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಗೋವಿಂದರಾಜ್ ಆಚಾರ್ಯ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಮಂಜುನಾಥ ದಾಸ್, ಗುರುರಾಜ್ ಆಚಾರ್ಯ, ಮಂಜುನಾಥ ಹಾಡಿಮನೆ, ಸುಬ್ರಮಣ್ಯ ಆಚಾರ್ಯ, ದಯಾನಂದ ಚಂದನ್ ಆಯ್ಕೆಯಾಗಿದ್ದರೇ, ಕಾರ್ಯದರ್ಶಿಯಾಗಿ ದೇವರಾಜ ಆಚಾರ್ಯ, ಪ್ರದೀಪ್ ಶೆಟ್ಟಿ, ಪ್ರದೀಪ್ ಆಚಾರ್ಯ, ಮಂಜುನಾಥ ಆಚಾರ್ಯ ಆಯ್ಕೆಯಾಗಿದ್ದಾರೆ. (ಕುಂದಾಪ್ರ ಡಾಟ್ ಕಾಂ ವರದಿ)

ಜೊತೆ ಕಾರ್ಯದರ್ಶಿಯಾಗಿ ಪ್ರಭಾಕರ ಮೊಗವೀರ, ಸೋಮಶೇಖರ, ಪ್ರಮೋದ್ ಆಚಾರ್ಯ, ಪ್ರಶಾಂತ ಆಚಾರ್ಯ, ಶಿವಾನಂದ ಚಂದನ್, ಸಂತೋಷ ಆಚಾರ್ಯ, ಸಂಘಟನಾ ಕಾರ್ಯದರ್ಶಿಯಾಗಿ ನಟರಾಜ ಆಚಾರ್ಯ, ರಾಜಶೇಖರ, ನಾಗರಾಜ ಚಂದನ್, ರಾಘವೇಂದ್ರ ಎಂ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಿಕ್ರಮ್, ಅಕ್ಷಯ ಶೆಟ್ಟಿ, ಪ್ರವೀಣ ಆಚಾರ್ಯ, ಶ್ರೀನಿವಾಸ ಗುಜ್ಜಾಡಿ, ಗಿರೀಶ್ ಎನ್, ಅಂಜನ ಕುಮಾರ್, ಕ್ರೀಡಾ ಕಾರ್ಯದರ್ಶಿಯಾಗಿ ನಾಗೇಂದ್ರ ಶೆಟ್ಟಿ, ಹರೀಶ್ ಎನ್, ನವೀನ್, ಪ್ರಸನ್ನ, ಅಣ್ಣಪ್ಪ, ನಿತಿನ್ ಶೆಟ್ಟಿ, ಶ್ರೀನಿವಾಸ ಆಚಾರ್ಯ, ಕೋಶಾಧಿಕಾರಿಯಾಗಿ ಲಕ್ಷ್ಮಣ ಚಂದನ್, ಮಹೇಶ್, ಮಹೇಂದ್ರ ಆಚಾರ್ಯ, ನಾಗಾರಾಜ ಶೆಟ್ಟಿ, ಮಂಜುನಾಥ ಹಕ್ಲುಮನೆ, ಗೌರವ ಲೆಕ್ಕ ಪರಿಶೋಧಕರಾಗಿ ಗಣೇಶ್ ಜಟ್ಟಿಹಿತ್ಲು, ರಾಜೇಂದ್ರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ. http://kundapraa.com/?p=6414

Exit mobile version