Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ನಿವೃತ್ತ ವಿಜ್ಞಾನ ಶಿಕ್ಷಕ ಗಂಗಾಧರ ಐತಾಳ್ ನಿಧನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ನಿವೃತ್ತಿ ವಿಜ್ಞಾನ ಶಿಕ್ಷಕ ಬಸೂರು ಮೂರುಕೈ ಬಳಿ ನಿವಾಸಿ ಗಂಗಾಧರ ಐತಾಳ್ (76) ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಶುಕ್ರವಾರ ಹೊಂದಿದರು.

ಮೂಲತಃ ಕೋಡಿ ಕನ್ಯಾನದವರಾದ ಗಂಗಾಧರ್ ಐತಾಳ್ ಅವರು, ಕುಂದಾಪುರ ಸೈಂಟ್ ಮೇರೀಸ್ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ವಿಜ್ಞಾನ ಮಾದರಿ ತಯಾರಿಸಿ, ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಅವರ ಕಾರ್ಯವಿಧಾನ ಅವರಿಗೆ ಜನಪ್ರಿಯತೆ ತಂದುಕೊಟ್ಟಿತು. ಐತಾಳ್ ಮಾಸ್ಟ್ರು ಎಂದೇ ಪ್ರಸಿದ್ಧರಾಗಿದ್ದರು.

ಅವರು ನಿವೃತ್ತಿ ಅನಂತರ ಗುರುಕುಲ ಪಬ್ಲಿಕ್ ಶಾಲೆಯಲ್ಲೂ ಸೇವೆ ಸಲ್ಲಿಸಿದ್ದರು. ಮಕ್ಕಳಿಗಾಗಿ ಖಗೋಳ ವಿಜ್ಞಾನ ಎನ್ನುವ ಪುಸ್ತಕ ಬರೆದಿದ್ದರು.

ಮೃತರು ಪತ್ನಿ ಸಾಹಿತಿ ಗಾಗೈ ನಿವೃತ್ತ ಪ್ರಾಧ್ಯಾಪಕಿ ಡಾ. ಪಾರ್ವತಿ ಜಿ. ಐತಾಳ್, ಪುತ್ರಿಯರಾದ ಕೆಎಂಸಿ ವೈದ್ಯೆ ಡಾ. ರಮ್ಯತಾ, ಎಂಜಿನಿಯರ್ ಸುಶ್ಮಿತಾ ಅವರನ್ನು ಅಗಲಿದ್ದಾರೆ.

Exit mobile version