Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪುಂದ: ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಬುಧವಾರ ಶಿವಮೊಗ್ಗ ಲೋಕಸಭಾ ಸದಸ್ಯ ಬಿ. ವೈ. ರಾಘವೇಂದ್ರ ಭೇಟಿನೀಡಿ ದೇವರ ದರ್ಶನ ಪಡೆದು ಪ್ರಧಾನ ಅರ್ಚಕ ಪ್ರಕಾಶ ಉಡುಪ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಇತ್ತಿಚಿಗಷ್ಟೆ ಈ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಶ್ರೀ ಮನ್ಮಾಹಾರಥೋತ್ಸವ ನಡೆದಿತು. ಈ ಉತ್ಸವ ಸಮಿತಿಯ ಗೌರವಾಧ್ಯಕ್ಷರಾಗಿದ್ದ ಸಂಸದರು ಕಾರಣಾಂತರದಿಂದ ಭಾಗವಹಿಸಲು ಸಾಧ್ಯವಾಗಿಲ್ಲದ ಹಿನ್ನೆಯಲ್ಲಿ ಸಮಿತಿಯ ಮನವಿ ಮೇರೆಗೆ ಬುಧವಾರ ಭೇಟಿ ನೀಡಿದ ಸಂಸದರನ್ನು ಸಮಿತಿಯ ವತಿಯಿಂದ ಗೌರವಿಸಲಾಯಿತು. ಅಷ್ಟಬಂಧ ಉತ್ಸವಕ್ಕೆ ತಮ್ಮ ವಯಕ್ತಿಕ ದೇಣಿಗೆ ನೀಡಿದ ಸಂಸದರು, ದೇವಳದಲ್ಲಿ ಸುಮಾರು ೩೮ ಲಕ್ಷ ವೆಚ್ಚದಲ್ಲಿ ನೂತನ ಅನ್ನಛತ್ರಕ್ಕೆ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದು, ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ಕೊಡಿಸುವ ಭರವಸೆ ನೀಡಿದರು.

ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ. ಎಸ್. ಸುರೇಶ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಯು. ಪಾಂಡುರಂಗ ಪಡಿಯಾರ್, ದೇವಳದ ಮಾಜಿ ಧರ್ಮದರ್ಶಿ ಬಿಜೂರು ಜಯರಾಮ ಶೆಟ್ಟಿ, ಉದ್ಯಮಿ ಕುಂಜಾಲು ವೆಂಕಟೇಶ ಕಿಣಿ, ಗುರುರಾಜ ಶೆಟ್ಟಿ ಗಂಟಿಹೊಳೆ, ನೆಲ್ಯಾಡಿ ದಿವಾಕರ ಶೆಟ್ಟಿ, ಯು. ಎ. ಮಂಜು ದೇವಾಡಿಗ, ಸುಧೀಂದ್ರ ಶೇಟ್, ಯು. ಸುಭಾಶ್ಚಂದ್ರ ಪುರಾಣಿಕ್, ದೀಟಿ ಸೀತಾರಾಮ ಮಯ್ಯ, ಸಮಿತಿ ಸದಸ್ಯರು, ಕ್ಷೇತ್ರ ಪುರೋಹಿತ ಉಪಾದಿವಂತರು, ದೇವಳದ ಸಿಬ್ಬಂದಿಗಳು ಇದ್ದರು.

Exit mobile version