Kundapra.com ಕುಂದಾಪ್ರ ಡಾಟ್ ಕಾಂ

ಎಳ್ಳಾರೆ: ವೈ. ವಿಠ್ಠಲ ಪ್ರಭು ನಿಧನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ:
ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದ ವೈ. ವಿಠ್ಠಲ ಪ್ರಭು (85) ಅವರು ಮಾ.22ರಂದು ಹೃದಯಾಘಾತದಿಂದ ನಿಧನರಾದರು.

ಅವರು ಪತ್ನಿ , ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಅವರ ಹಿರಿಯ ಪುತ್ರ ಕೃಷ್ಣಮೂರ್ತಿ ಪ್ರಭು ಆದಾಯ ತೆರಿಗೆ ಇಲಾಖೆಯ ನಿವ್ರತ್ತ ಅಧಿಕಾರಿ ಮತ್ತು 2 ನೇ ಪುತ್ರ ಬಿ. ಸದಾಶಿವ ಪ್ರಭು ಐಎಎಸ್ ವಿಜಯನಗರ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಅವರ ಅಂತ್ಯಕ್ರೀಯೆಯು ಎಳ್ಳಾರೆಯ ಬೆಂಬರಬೈಲಿನ ಅವರ ಸ್ವಗೃಹದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Exit mobile version